KOPPAL DIST COMPLETE INFORMATION AND NEWS

Text Box: ನಮ್ಮ ಬಗ್ಗೆ

ಸಿರಾಜ್ ಬಿಸರಳ್ಳಿ

 ಸಂಪಾದಕ

ಹುಸೇನಪಾಶಾ

ಸಹಸಂಪಾದಕ

           ಕಳೆದ  ಎಂಟು ಹತ್ತು ವರ್ಷಗಳಿಂದ ಪತ್ರಕರ್ತರ ಜೊತೆಗೆ ಕೆಲಸ ಮಾಡಿದ ಅನುಭವ. ಕೊಪ್ಪಳದ ಬಹುತೇಕ ಎಲ್ಲ ಪತ್ರಿಕೆಗಳ ಪುಟವಿನ್ಯಾಸ ಮಾಡಿದ ಅನುಭವ. ಮೂಲತಃ ಕಂಪ್ಯೂಟರ್ ಹಾರ್ಡವೇರ್ ಇಂಜಿನಿಯರ್. ಮಾಡುತ್ತಿರುವ ಕೆಲಸ ಕಂಪ್ಯೂಟರ್ ಅನಿಮೇಷನ್, ಡಿಜೈನಿಂಗ್. ಸಧ್ಯ ಕರಿಷ್ಮಾ ಡಿಜಿಟಲ್ ಸ್ಟುಡಿಯೋ ಎಂಬ ಫೋಟೋ ಸ್ಟುಡಿಯೋ ನಡೆಸುತ್ತಿದ್ದೇನೆ.

           ಕಥಾಸಾಹಿತ್ಯ ಆಸಕ್ತಿಯ ವಿಷಯ. ಲಂಕೇಶ್,ಕುಂ.ವಿ., ಮೊಗಳ್ಳಿ ಗಣೇಶ್, ದೇವನೂರು ಮಹಾದೇವ ಮೆಚ್ಚಿನ ಲೇಖಕರು.

           ಅಲ್ಲಲ್ಲಿ ಗೀಚಿದ್ದು ಉಂಟು, ಕೆಲವು ಕಥೆಗಳು ಸಂಯುಕ್ತ ಕರ್ನಾಟಕ, ಪ್ರಿಯಾಂಕ, ವಾರಪತ್ರಿಕೆ, ಸುದ್ದಿಮೂಲ,ನಾಗರಿಕ ಮತ್ತಿತರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕಳೆದ 10 ವರ್ಷಗಳಿಂದ ಟ್ಯಾಬ್ಲಾಯ್ಡ್ ಪತ್ರಿಕೊಧ್ಯಮದಲ್ಲಿರುವ ಹುಸೇನ್ ಪಾಷಾ ವಿದ್ಯಾರ್ಥಿ ದೆಸೆಯಲ್ಲಿಇ ಕಥೆ, ಕವನ ಬರೆದು ಬಹುಮಾನ ಪಡೆದವರು. ನಂತರ ಪ್ರಜಾವಾಣಿ, ಸುಧಾ, ತರಂಗ, ವಿಜಯಕರ್ನಾಟಕ, ಸಂಯುಕ್ತ ಕರ್ನಾಟಕ, ಹೊಸತು ಇನ್ನಿತರ ಪತ್ರಿಕೆಗಳಲ್ಲಿ ಇವರ ಲೇಖನ, ಕಥೆ,  ಬರಹ ಪ್ರಕಟವಾಗಿವೆ.

           ಸಾರ್ವಜನಿಕ ಆಡಳಿತ ವಿಷಯದಲ್ಲಿ ಎಂ.ಎ. ಓದುತ್ತಿರುವ ಹುಸೇನಪಾಷಾ ಸೂರ್ಯ ಮತ್ತು ಲಂಕೇಶ ವಾರಪತ್ರಿಕೆಗಳಲ್ಲಿ ಮೂರು ವರ್ಷ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಅಗ್ನಿ ಶ್ರೀಧರವರ ಅಗ್ನಿ ವಾರಪತ್ರಿಕೆಯಲ್ಲಿ ವರದಿಗಾರರಾಗಿದ್ದು, ಕಳೆದ 3  ವರ್ಷಗಳಿಂದ ಅಗ್ನಿದಿವ್ಯ ಮಾಸಪತ್ರಿಕೆಯನ್ನು ನಡೆಸುತ್ತಿದ್ದಾರೆ. ಇವರು ನಮ್ಮ ಕನ್ನಡನೆಟ್.ಕಾಂನ ಸಹ ಸಂಪಾದಕರು

 ಕೊಪ್ಪಳ ಜಿಲ್ಲೆಯ ಸಮಗ್ರ ಮಾಹಿತಿಯನ್ನು ನೀಡುವ ಕೆಲಸಕ್ಕೆ ಕೈಹಾಕಿ ಇಂದು ನಿಮ್ಮ ಮುಂದೆ ಇಡುತ್ತಿದ್ದೇವೆ  ವಿವಿದ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಕೊಪ್ಪಳ ದಪರಿಪೂರ್ಣ ಮಾಹಿತಿಯನ್ನು ನೀಡುವ  ಉದ್ದೇಶದಿಂದ ಇದಕ್ಕೆ ಶ್ರಮಿಸುತ್ತಿರುವ ನಮ್ಮ  ಕನ್ನಡ ನೆಟ್ ಬಳಗ ಇದು ನಿಮ್ಮಲ್ಲ ಲಭ್ಯವಿರುವ ಕೊಪ್ಪಳ ಜಿಲ್ಲೆಯ ಯಾವುದೇ ವಿಶೇಷ ಮಾಹಿತಿ ನಮ್ಮೊಂದಿಗೆ ಹಂಚಿಕೊಳ್ಳಿ

ನಮ್ಮ   ಇಮೇಲ್ ವಿಳಾಸ : ಕನ್ನಡನೆಟ್@ಇನ್.ಕಾಮ್   

kannadanet@gmail.com kannadanet@in.com,

sirajbisaralli@in.com ಈ ವಿಳಾಸಕ್ಕೆ ಕಳುಹಿಸಬಹುದು