CONTACT US:      kannadanet.com Karishma Digital studio jawahar road, Koppal-583 231

ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail:   kannadanet@gmail.com,sirajbisaralli@in.com

ಮುಖಪುಟ    ಸಾಹಿತಿಗಳು   ಪ್ರತಿಸ್ಪಂದನೆ       ನಮ್ಮನ್ನು ಸಂಪರ್ಕಿಸಿ

KOPPAL DIST COMPLETE INFORMATION AND NEWS

ಕನ್ನಡನೆಟ್.ಕಾಂ

Text Box: ಉತ್ತರ ಕರ್ನಾಟಕ ಮತ್ತು ಕೊಪ್ಪಳ ಜಿಲ್ಲೆಯ ಪ್ರಪ್ರಥಮ ಕನ್ನಡ  ಇ-ಪತ್ರಿಕೆ

ವಿಠ್ಠಪ್ಪ ಗೋರಂಟ್ಲಿ

ಪತ್ರಕರ್ತ,ಸಾಹಿತಿ,ಹೋರಾಟಗಾರರು

ಕೊಪ್ಪಳ  ಎಂದ ತಕ್ಷಣ  ತಟ್ಟಂತ ನೆನಪಾಗುವವರು ವಿಠ್ಠಪ್ಪ ಗೋರಂಟ್ಲಿ. ಸೀದಾ ಸಾದಾ ನಡೆನುಡಿಯ ವಿಠ್ಠಪ್ಪನವರು ಸಾಹಿತಿಯಾಗಿ ,  ಪತ್ರಕರ್ತರಾಗಿ , ಸಮಾಜಸೇವಕರಾಗಿ, ಹೋರಾಟಗಾರರಾಗಿ, ರಾಜಕಾರಣಿಯಾಗಿ ಹೀಗೆ  ಎಲ್ಲ ರಂಗದಲ್ಲೂ ಕೈಯಾಡಿಸಿದವರು.

     ಜನನ : 19-05-1948  ತಂದೆ : ರುಕ್ಮಪ್ಪ     ತಾಯಿ : ಕಾಳಮ್ಮ  

ಸಾಹಿತ್ಯಾಸಕ್ತಿಯಿಂದ  ಉಪನಿಷತ್ತು, ಭಗವದ್ಗೀತೆ, ನಿಜಗುಣರ ಶಾಸ್ತ್ರ, ವಿವೇಕಾನಂದರ ಸಾಹಿತ್ಯ , ಕುವೆಂಪು, ಹಳಗನ್ನಡ ಕೃತಿಗಳನ್ನೆಲ್ಲ  ಅಧ್ಯಯನ ಮಾಡಿದ್ದಾರೆ.   1980ನೇ ಇಸ್ವಿಯಿಂದ ರಾಜ್ಯ ಪ್ರಮುಖ ಪತ್ರಿಕೆಗಳಲೆಲ್ಲ ಕಥೆ, ಕವನ, ಲೇಖನಗಳು ಪ್ರಕಟವಾಗಿವೆ.

*          1989-99ರವರೆಗೆ ಲಂಕೇಶ ಪತ್ರಿಕೆಯ ವರದಿಗಾರರಾಗಿ ಸೇವೆ

· 1999-2002 ರವರೆಗೆ ಹಾಯ್ ಬೆಂಗಳೂರ್ ಪತ್ರಿಕೆ ವರದಿಗಾರ

· ಸುದ್ದಿಮೂಲ ರಾಯಚೂರಿನ ದಿನಪತ್ರಿಕೆ ಉಪಸಂಪಾದಕನಾಗಿ ಹಲವು  ವರ್ಷಗಳ ಸೇವೆ. ದಿನಕಹಳೆ ಕೊಪ್ಪಳದ ಮೊಟ್ಟಮೊದಲ ದಿನಪತ್ರಿಕೆಯನ್ನು ಪ್ರಾರಂಭಿಸಿ ಕೆಲವು ದಿನ ನಡೆಸಿದ್ದಾರೆ.

· ಕೊಪಣ ಕಿರಣ ವಾರಪತ್ರಿಕೆಯನ್ನು ನಡೆಸಿಕೊಂಡು ಬಂದಿದ್ದಾರೆ.

ಕೃತಿಗಳು : 1986ರಲ್ಲಿ ಕಪ್ಪೊಡಲ ಕರೆ ಕವನಸಂಕಲನ, 1997ರಲ್ಲಿ ಈ ನೆಲದೊಡಲಲ್ಲಿ ಕವನ ಸಂಕಲನ, 2000ರಲ್ಲಿ ಸೆರೆ ಕಥಾ ಸಂಕಲನ, 1997ಸಾಹಿತ್ಯ  ಅಕಾಡೆಮಿ ಪ್ರಬಂದ 1997ರ ಸಂಪಾದಕತ್ವ 2000ರಲ್ಲಿ ಪತ್ರಿಕಾ    ಅಕಾಡೆಮಿಯಿಂದ ತನಿಖಾ ವರದಿ ಪ್ರಕಟ. ವಿಮೋಚನ ತಿರುಳ್ಗನ್ನಡ ಮುಂತಾದ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯಲ್ಲಿ ಇದ್ದದ್ದು  ಮತ್ತು ಅನೇಕ  ಅಂಥಾಲಜಿಗಳಲ್ಲಿ ಲೇಖನ ಪ್ರಕಟ . ಯಾರೂ ಹಾಡದ ಹಾಡು 2003 ಸಮಗ್ರ ಕವನ ಸಂಕಲನ.

   ಹೋರಾಟ : 1982 ಕುದರಿಮೋತಿ ಹೋರಾಟ ಮತ್ತು ಗೋಕಾಕ ಚಳುವಳಿಯಲ್ಲಿ ಕೊಪ್ಪಳ ಕನ್ನಡ ಕ್ರೀಯಾ ಸಮಿತಿ ಉಪಾದ್ಯಕ್ಷನಾಗಿದ್ದು, ಕೊಪ್ಪಳ ಜಿಲ್ಲಾ ಹೋರಾಟ ಸಮಿತಿ  ಕಾರ್ಯದರ್ಶಿಯಾಗಿ ಜಿಲ್ಲೆಗಾಗಿ ಹಾಗು ಹಲವಾರು ಸಮಸ್ಯೆಗಳಿಗಾಗಿ ಹೋರಾಟ, ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಅಧ್ಯಕ್ಷ, ರಾಯಚೂರು ಜಿಲ್ಲಾ ಕನ್ನಡ ಕ್ರೀಯಾ ಸಮಿತಿ ಗೌರವ  ಅಧ್ಯಕ್ಷ, ರಾಜ್ಯ ಕೈಮಗ್ಗ ನೇಕಾರರ ಸಂಘದ  ಉಪಾಧ್ಯಕ್ಷ, ತಿರುಳ್ಗನ್ನಡ ಕ್ರೀಯಾ ಸಮಿತಿ ಅಧ್ಯಕ್ಷ, ಭಾಗ್ಯನಗರ ವಿದ್ಯುತ ಮಗ್ಗಗಳ ಸಹಕಾರ ಸಂಘದ   ಅಧ್ಯಕ್ಷ, ರಾಯಚೂರು ಜಿಲ್ಲಾ ಸರಬರಾಜು ಮತ್ತು ಮಾರಾಟ ಸಹಕಾರದ ಸಂಘದ ನಿರ್ದೆಶಕ    ಇನ್ನೂ ಹಲವಾರು ಸಂಘ ಸಂಸ್ಥೆ- ಸಂಘಟನೆಗಳಲ್ಲಿ ಪಾಲ್ಗೊಂಡು ಹೋರಾಟ ಮಾಡಿದ್ದಾರೆ.  ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾದನ ಕಾರ್ಯದರ್ಶಿಯಾಗಿ ಒಂದು ಅವಧಿ ಆದ್ಯಕ್ಷರಾಗಿ ಎರಡು ಅವಧಿ ಮತ್ತು ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ  ಕಾರ್ಯಕಾರಿ ಮಂಡಳಿಗೆ ಒಂದು ಅವಧಿಗೆ ಚುನಾಯಿತರಾಗಿ ಸೇವೆ ಸಲ್ಲಿದ್ದಾರೆ. 25ನೇರಾಜ್ಯ ಪತ್ರಕರ್ತರ ಸಮಾವೇಶ  ಮಾಡಿಸಿದ್ದಾರೆ.

ಸಂದ ಗೌರವಗಳು: ಕೊಪ್ಪಳ ಜಿಲ್ಲಾ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷ,ಕೊಪ್ಪಳ ಜಿಲ್ಲಾ ದ್ವಿತಿಯ ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷ 22,23,24   ಅಕ್ಟೋಬರ್ 2005, ಕರ್ನಾಟಕ ರಾಜ್ಯ  ಪತ್ರಿಕಾ ಅಕಾಡೆಮಿ ಪ್ರಶಸ್ತಿ 2002. ಬುದ್ದ ಪ್ರಶಸ್ತಿ 2000, ವಿಶ್ವೇಶ್ವರಯ್ಯ ಪ್ರಶಸ್ತಿ-2003, ತಿರುಳ್ಗನ್ನಡ ಸನ್ಮಾನ, ಕಬೀರ ಜೇಡ ದಾಸೀಮಯ್ಯ  ಪ್ರಶಸ್ತಿ 2001, ಹೂಗಾರ ಸ್ಮಾರಕ ಪ್ರಶಸ್ತಿ-2004 ಮುಂತಾದವುಗಳು ಮತ್ತು ಷಷ್ಟಬ್ದಿ ಕಾರ್ಯಕ್ರಮ  ಗೋರಂಟಿ ಅಭಿನಂಧನಾ ಗ್ರಂಥ  ಅರ್ಪಣೆ 11-1-2009ರಂದು  ಸ್ನೇಹಿತರು, ಅಭಿಮಾನಿಗಳು ಸೇರಿ ಹಲವಾರು ಸಂಘಟನೆಗಳಿಂದ ಮಾಡಿದ್ದು. 

ಪ್ರಸ್ತುತ ವಿಳಾಸ :

ವಿಠ್ಠಪ್ಪ ಗೋರಂಟ್ಲಿ,

3ನೇ ವಾರ್ಡ, ಭಾಗ್ಯನಗರ-583231.

ತಾ:ಜಿ:ಕೊಪ್ಪಳ ಮೊ: 9448333159

ವಿಠ್ಠಪ್ಪ ಗೋರಂಟ್ಲಿ, Vittappa Gorantly

ವಿಠ್ಠಪ್ಪ ಗೋರಂಟ್ಲಿ

Www.kannadanet.com