CONTACT US:      kannadanet.com Karishma Digital studio jawahar road, Koppal-583 231

ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail:   kannadanet@gmail.com,sirajbisaralli@in.com

ಮುಖಪುಟ    ಸಾಹಿತಿಗಳು   ಪ್ರತಿಸ್ಪಂದನೆ       ನಮ್ಮನ್ನು ಸಂಪರ್ಕಿಸಿ

    KOPPAL DIST COMPLETE INFORMATION AND NEWS

ಕನ್ನಡನೆಟ್.ಕಾಂ

Text Box: ಉತ್ತರ ಕರ್ನಾಟಕ ಮತ್ತು ಕೊಪ್ಪಳ ಜಿಲ್ಲೆಯ ಪ್ರಪ್ರಥಮ ಕನ್ನಡ  ಇ-ಪತ್ರಿಕೆ

Www.kannadanet.com

Text Box:  ಭಾರತದಲ್ಲಾಗ ಬ್ರಿಟಿಷ್ ಸಾಮ್ರಾಜ್ಯ  ಕಹಿ ದಿನಗಳು ರಾಜಕೀಯವಾಗಿ , ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಮಾಜದ ಗ್ರಾಮೀಣ ಬದುಕಿನ ಜನಗಳು  ರೈತರು ಹಾಗೂ ಕೂಲಿ ಕಾರ್ಮಿಕರು) ಅತ್ಯಂತ ದುಃಖಕರ ರೀತಿಯಲ್ಲಿ ತಮ್ಮ ದಿನಗಳನ್ನು ಕಳೆಯುತ್ತಿದ್ದ ಕಾಲವದು. ಆ ದಿನಗಳು ಅದೆಂತಹ ಕಷ್ಟಕರ ಹಾಗೂ ಕರಾಳ ರೀತಿಯಲ್ಲಿದ್ದವೆಂದರೇ ಊಹಿಸಲಸಾಧ್ಯದದ್ದು. ಕೆಳ ವರ್ಗದ ಕೂಲಿ ಕಾರ್ಮಿಕರ ರೈತರ ಹಾಗೂ ಪಶುಗಳ ನಡುವಿನ ಅಂತರವೇ ಇಲ್ಲವಾಗಿತ್ತು.
	ಸಮಾಜದ ಕೆಳವರ್ಗದ  ಜನರನ್ನು ಮನುಷ್ಯರೇ ಅಲ್ಲವೆಂಬಂತೆ ನೋಡಲಾಗುತ್ತಿತ್ತು. ಸಮಾಜದ ಕೆಲವೇ ವರ್ಗದ ಜನಗಳಿಗೆ ಮೀಸಲಾಗಿದ್ದ ಶಿಕ್ಷಣದಿಂದ ವಂಚಿತರಾಗಿದ್ದ ಮುಗ್ದ ಗ್ರಾಮೀಣ ಕೆಳವರ್ಗದ ಜನಗಳು ಇಂತಹ ಶೋಷಣೆಯನ್ನು ತಾತ್ವಿಕ ಮುಗ್ದತೆಯಲ್ಲಿಯೇ ಇದು ನಮ್ಮ ಮರು ಜನ್ಮದಲ್ಲಿ ಮಾಡಿದ ಕರ್ಮದ ಫಲವೆಂದೇ ಭಾವಿಸಿ ಬದುಕಿದರು. ಅಂದು ಕೂಡ ಗ್ರಾಮೀಣ ಬದುಕನ್ನು ಬಂಡವಾಳ ಶಾಹಿಯಿತ್ತು. ಪುರೋಹಿತಶಾಹಿಗಳು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ಬದುಕಿನ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಿದ್ದರು.
	ಆದರೆ ಇಂದು ಕೂಡ ಭಾರತ ಸ್ವಾತಂತ್ರ್ಯ ನಂತರ 60 ವರ್ಷಗಳು ಉರುಳಿದರೂ ಗ್ರಾಮೀಣ ರೈತನ ಹಾಗೂ ಕೂಲಿ ಕಾರ್ಮಿಕ ಬದುಕು ಮತ್ತದೇ ಬಂಡವಾಳಶಾಹಿ ಅಂದರೆ ಬಹುರಾಷ್ಟ್ರೀಯ  ನೃತ್ಯ ರಾಜಕೀಯ ರಂಗೀನಾಟದಲ್ಲಿ ಬಂದನದಲ್ಲಿ ಸಿಲುಕಿ ಮತ್ತದೇ ದಾಸ್ಯತನದ ಕರಿನೆರಳಲ್ಲಿ ಒಂದು ಹೊತ್ತಿನ  ಊಟಕ್ಕೂ ಗತ್ಯಂತರವಿಲ್ಲದೇ ಬದುಕನ್ನು ಸವೆಸಲು ಪರದಾಡುವಂತಹ ಸ್ಥಿತಿ ವಾಸ್ತವಿಕ ಭಾರತದಲ್ಲಿ ಗ್ರಾಮೀಣ ಬದುಕಿನ ನೈಜ ಚಿತ್ರವನ್ನೇ ಬಿಂಬಿಸುತ್ತದೆ. 
	ರೈತರ ಮತ್ತು ಕೂಲಿ ಕಾರ್ಮಿಕರ ಪರವಹಿಸಿ ಮಾಡುವ ಹೋರಾಟಗಳು ತಮ್ಮ ತಮ್ಮ ಸ್ವ ಹಿತಾಸಕ್ತಿಯಲ್ಲಿಯೇ ಕೊನೆಗಾಣುತ್ತವೆ. ಸರಕಾರದ ಯಾವುದೇ ಗ್ರಾಮೀಣ ಅಭಿವೃದ್ದಿ ಯೋಜನೆಗಳು ಫಲಾನುಭವಿಗಳ ಬದುಕಿಗೆ ಸ್ಪಂದಿಸುತ್ತಿಲ್ಲ , ಇಂತಹ ಕಾರಣದಿಂದಾಗಿಯೇ ಬೇರೆ ಬೇರೆ  ಸಂಘ ಸಂಸ್ಥೆಗಳಲ್ಲಿ ಸಮಾಜ ಸೇವೆಗಾಗಿ ನಮ್ಮನ್ನು ತೊಡಗಿಸಿಕೊಂಡು ಅವರ ಕಾರ್ಯನಿಷ್ಠೆಯನ್ನು ಕಂಡು ಬೇಸತ್ತು ಅಂತಹ ಎಲ್ಲ ಸಂಘ ಸಂಸ್ಥೆಗಳಿಂದ ದೂರವುಳಿದು ಸಾದ್ಯವಾದಷ್ಟು ಮಟ್ಟಿಗೆ ಗ್ರಾಮೀಣ ರೈತರ ಹಾಗೂ ಕೂಲಿ ಕಾರ್ಮಿಕರ ಬದುಕನ್ನು ಹಸನುಗೊಳಿಸಲೆಂದೇ ಹುಟ್ಟು ಹಾಕಲ್ಪಟ್ಟ ಸಂಸ್ಥೆ ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ.
	ಸಧ್ಯ ಸಂಘದಲ್ಲಿಯ ನೋಂದಾಯಿತ ರೈತರ ಸಂಖ್ಯೆ 2 ಲಕ್ಷ 75ಸಾವಿರ ದಾಟುತ್ತದೆ. ಸಂಘ ಅಸ್ತಿತ್ವದಲ್ಲಿ ಬಂದ ಕೆಲವೇ ದಿನಗಳಲ್ಲಿ ರೈತರ ನೋಂದಾಯಿತ ಸಂಖ್ಯೆಯೆ ಸೂಚಿಸುವಂತೆ ಅತ್ಯಂತ ಜನಪ್ರಿಯತೆಯನ್ನು ಗಳಿಸಿಕೊಂಡು ಸಾಧ್ಯವಾದಷ್ಟು  ಗ್ರಾಮೀಣ ರೈತರ ಕೂಲಿ ಕಾರ್ಮಿಕರ ನೋವನ್ನುನ್ನು  ಆಲಿಸುತ್ತ ಅವರ ಸಮಸ್ಯೆಗಳಿಗೆ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸುತ್ತದೆ. ಅತ್ಯಂತ ಕಠಿಣ ಹೋರಾಟದ ಹಾದಿಯನ್ನು  ಕ್ರಮಿಸಿ ಬಂದ ಸಂಘ  ಇಂದು ಉತ್ತರ ಕರ್ನಾಟಕ ಮಾತ್ರವಲ್ಲ ದಕ್ಷಿಣ ಕರ್ನಾಟಕದಲ್ಲಿಯೂ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ.

 ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ

Uttar Karnataka Pradesh Rait Sangha

Kendra valaya : CMC Complex, Opp. New Busstand, Koppal-583 231.

ಕೇಂದ್ರ ವಲಯ: ಸಿ ಎಂಸಿ ಕಾಂಪ್ಲೆಕ್ಸ್, ಹೊಸ ಬಸ್ ನಿಲ್ದಾಣ ಎದುರಿಗೆ,ಕೊಪ್ಪಳ-583 231.

 ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ

ಸ್ಥಾಪನೆ ಮತ್ತು ಅಸ್ತಿತ್ವ

ಉದ್ದೇಶಿತ ಯೋಜನೆಗಳು

· ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ

· ಅತಿ ಕಡುಬಡವ ಹೆಚ್ಐವಿ/ ಏಡ್ಸ್ ಪುನರ್ವಸತಿ

· ಬಂಜರು ಭೂಮಿ ಅಭಿವೃದ್ದಿ ಯೋಜನೆ

ಸಂಘದ ಕಾರ್ಯ ಚಟುವಟಿಕೆಗಳು

ಮುಖ್ಯವಾಗಿ ತುಳಿತಕ್ಕೊಳಗಾದ ಗ್ರಾಮೀಣ ರೈತರ ಹಾಗೂ ಕೂಲಿ ಕಾರ್ಮಿಕರ ನೊಂದ

ಮನಸ್ಸಿಗೆ ಸಾಂತ್ವನ ನೀಡಿ ಅವರ ಸಮಸ್ಯೆಗೆ ಸ್ಪಂದಿಸುವದೇ ಸಂಘದ ಮೂಲ ಧ್ಯೇಯ.

· ರೈತರನ್ನು  ಒಗ್ಗೂಡಿಸಿ ಸಂಘಟನೆಯಲ್ಲಿ ಕರೆತರುವುದು.

· ಅನ್ಯಾಯದಿಂದ ಕಂಗಾಲಾದ  ರೈತರ ನೆರವಿಗೆ ಧಾವಿಸುವುದು.

· ತುಳಿತಕ್ಕೊಳಗಾದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು.

· ನಾಗರಿಕ ಹಕ್ಕುಗಳ ಬಗ್ಗೆ ತಿಳುವಳಿಕೆ ನೀಡುವುದು

· ವೃದ್ದರು ಹಾಗೂ ಮಕ್ಕಳಿಗೆತೊಂದರೆಯಾಗದಂತೆ ಸಾಮಾಜಿಕ ಮೌಲ್ಯವನ್ನು ಕಾಪಾಡಲು ಕೌಟುಂಬಿಕ ತಿಳುವಳಿಕೆ ನೀಡುವುದು

· ಮಹಿಳೆಯರ ಗೌರವ ಹಾಗು ಹಕ್ಕುಗಳ ಬಗ್ಗೆ ವಿಚಾರಗೋಷ್ಠಿಗಳು ಹಾಗೂ ತಿಳುವಳಿಕೆ ಕಾರ್ಯಕ್ರಮಗಳು

· ರೈತರಿಗಾಗಿ ಇರುವ ಸರಕಾರಿ ಯೋಜನೆಗಳ ಬಗ್ಗೆ ಗ್ರಾಮೀಣ ರೈತರಿಗೆ ಸಂಘಟನೆಯ ಮುಖಾಂತರ ತಿಳುವಳಿಕೆ ನೀಡುವುದು

· ಕಾಯಕವೇ ಕೈಲಾಸದ ಪರಿಕಲ್ಪನೆಯನ್ನು ಗ್ರಾಮೀಣ ಯುವ ಜನತೆಯಲ್ಲಿ ತುಂಬಿ ಅವರನ್ನು ಸ್ವಯಂ ಉದ್ಯೋಗದಲ್ಲಿ ತೊಡಗಿಸಿ ಅವರಿಗೆ ಬೇಕಾದ ಮಾರ್ಗದರ್ಶನ ಮಾಡುವುದು

· ಸಂಘದ ವತಿಯಿಂದ ಅನ್ಯಾಯದ ವಿರುದ್ದ ಹೋರಾಟಗಳನ್ನು  ನಡೆಸುವುದು .

· ಕಾಯಿಲೆ ಪೀಡಿತರಿಗೆ ಸರಕಾರಿ ಸೌಲಭ್ಯವನ್ನು ಒದಗಿಸುವುದು ಮತ್ತು ರೋಗಿಗಳ ಪುನರ್ವಸತಿ ಯೋಜನೆ.

· ಹೆಚ್ ಐವಿ/ ಎಡ್ಸ್ ತಡೆಗೆ ಪ್ರಚಾರ ಕಾಲಂನ ಕ್ರಮಗಳು.

· ಕುಷ್ಠರೋಗಿಗಳ ಮಾನಸಿಕ ಅಸ್ವಸ್ಥರಿಗೆ ಅವರ ಕುಟುಂಬದ ಸಹಕಾರದೊಂದಿಗೆ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವುದು.

· ಬಂಜರು ಭೂಮಿಯನ್ನು ಅಭಿವೃದ್ದಿಗೊಳಿಸುವ ಅತ್ಯಂತ ಮಹತ್ವದ ಯೋಜನೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವುದು.

· ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು  ಇರುವ ವೈಜ್ಞಾನಿಕ ರೀತಿಗಳನ್ನು ರೈತರಿಗೆ  ತಿಳಿಸುವುದು.

· ಅಂತರ್ಜಲ ಹೆಚ್ಚಿಸುವ ವಿಧಿ ವಿಧಾನಗಳನ್ನು ಅನುಷ್ಠಾನಗೊಳಿಸುವ ತಿಳುವಳಿಕೆ ನೀಡುವ ಕಾರ್ಯಗಾರ ನಡೆಸುವುದು

· ಗ್ರಾಮೀಣ ರೈತರಿಗೆ ಭೂ ಹಕ್ಕುಗಳ ಕುರಿತು ತಿಳುವಳಿಕೆ ನೀಡುವುದು.

Text Box: ಶ್ರೀ ಬಸವರಾಜ ಹೆಚ್.ಪೈಲವಾನ್
 ಉಪಾಧ್ಯಕ್ಷರು
ಶ್ರೀ ರಂಗಸುಬ್ಬಣ್ಣ ಶ್ರೇಷ್ಠಿ
 ಉಪಾಧ್ಯಕ್ಷರು
ಶ್ರೀ ಎಸ್.ಆರ್.ನಾಯಕ್
ಉಪಾದ್ಯಕ್ಷರು 

ಶ್ರೀಶೈಲತುರಕಾಣಿ 
ಗೌರವಾಧ್ಯಕ್ಷರು
ಶ್ರೀ ರಾಮಣ್ಣ ಮರಡಿ
 ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರು
ಶ್ರೀ ಮಂಜುನಾಥ ಪ್ರಧಾನ ಕಾರ್ಯದರ್ಶಿಗಳು 
ಶ್ರೀ  ಕೊಟ್ರಪ್ಪ ಹಡಗಲಿ 
ರಾಜ್ಯ ಸಮಿತಿ ಸದಸ್ಯರು
ಶ್ರೀ ಶಂಕರಗೌಡ ಭಾಗಲಕೋಟ
ರಾಜ್ಯ ಸಮಿತಿ  ಸದಸ್ಯರು
ಶ್ರೀ ಖೈರುನ್ನಿಸಾ ಬೇಗಂ
ರಾಜ್ಯ ಸಮಿತಿ ಸದಸ್ಯರು
ಶ್ರೀ ಹೆಚ್.ಜಿ.ಅಂಬ್ರೇಷ್
ರಾಜ್ಯ ಜಂಟಿ ಕಾರ್ಯದರ್ಶಿ
ಶ್ರೀ ಲಕ್ಷ್ಮಣಗೌಡ ಬಿರಾದಾರ
ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರು

ಜಿಲ್ಲಾಧ್ಯಕ್ಷರು
ಕೊಪ್ಪಳ
ಶ್ರೀ ದೇವಪ್ಪ ಚೌಟಗಿ
ಬಳ್ಳಾರಿ : 
ಶ್ರೀ ಎಲ್.ರಾಮಾನಾಯ್ಕ
ಗದಗ: 
ಶ್ರೀ ಮಹಾಲಿಂಗಪ್ಪ ಹಣಸಿ
ಹಾವೇರಿ : 
ಶ್ರೀ ಅರುಣ ಬಿ.
ಧಾರವಾಡ : 
ಶ್ರೀ ಮಲ್ಲಿಕಾರ್ಜುನಯ್ಯ ಸ್ವಾಮಿ
ಭಾಗಲಗೋಟೆ :
 ಶ್ರೀ ಶಂಕರಗೌಡ
ಬೆಳಗಾಂ :
ಶ್ರೀ ಗೋಪಾಲ ಉಂದ್ರಿ
ಬಿಜಾಪೂರ :
 ಶ್ರೀ ಲಕ್ಷ್ಮಣಗೌಡ ಬಿರಾದಾರ
ಬೀದರ್ ;
 ಶ್ರೀ ಬಸವರಾಜ ಎ.ಪೈಲ್ವಾನ
ದಾವಣಗೆರೆ :
 ಶ್ರೀ ವಿರುಪಾಕ್ಷಗೌಡರು