CONTACT US:      kannadanet.com Karishma Digital studio jawahar road, Koppal-583 231

ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail:   kannadanet@gmail.com,sirajbisaralli@in.com

ಮುಖಪುಟ    ಸಾಹಿತಿಗಳು   ಪ್ರತಿಸ್ಪಂದನೆ       ನಮ್ಮನ್ನು ಸಂಪರ್ಕಿಸಿ

Kannadanet.com KOPPAL DIST COMPLETE INFORMATION AND NEWS

ಕನ್ನಡನೆಟ್.ಕಾಂ

Text Box: ಉತ್ತರ ಕರ್ನಾಟಕ ಮತ್ತು ಕೊಪ್ಪಳ ಜಿಲ್ಲೆಯ ಪ್ರಪ್ರಥಮ ಕನ್ನಡ  ಇ-ಪತ್ರಿಕೆ

ಅಲ್ಲಮಪ್ರಭು ಬೆಟ್ಟದೂರು ಸಾಹಿತಿ,ಹೋರಾಟಗಾರರು

ಕೊಪ್ಪಳ ಮತ್ತ  ಹೋರಾಟಗಳು ಎಂದರೆ ಅಲ್ಲಮಪ್ರಭು ಬೆಟ್ಟದೂರು ಎನ್ನುವಷ್ಟರಮಟ್ಟಿಗೆ ಕೊಪ್ಪಳದ  ಪ್ರತಿಯೊಂದು ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿದ್ದು  ಹೋರಾಟವನ್ನು ಮಾಡುತ್ತಾ ಬಂದವರು ಅಲ್ಲಮಪ್ರಭು ಬೆಟ್ಟದೂರು.ಬಂಡಾಯ ಸಾಹಿತ್ಯ,ಸಂಘಟನೆಯಲ್ಲಿ ಯಾವಾಗಲೂ ಮುಂದು .

ಜನನ : 30-7-1951

ವಿದ್ಯಾಭ್ಯಾಸ :  ಎಂ.ಎ.(ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ (1974)

ವೃತ್ತಿ : ಪ್ರಾಂಶುಪಾಲರು ಶ್ರೀ ಗವಿಸಿದ್ಧೇಶ್ವರ ಕಾಲೇಜ್,ಕೊಪ್ಪಳ

ಕಾವ್ಯ ಕೃತಿಗಳು :  ಇದು ನನ್ನ ಭಾರತ (1977), ಕುದರಿಮೋತಿ ಮತ್ತು ನೀಲಗಿರಿ (1989), ಕೆಡಹಬಲ್ಲರು ಅವರು ಕಟ್ಟಬಲ್ಲೆವು ನಾವು ( 2001)

ಪ್ರಚಲಿತ ಅಂಕಣ ಕೃತಿ : ವರ್ತಮಾನ (2007)

ಸಂಪಾದನಾ ಕೃತಿಗಳು : ತಿರುಳ್ಗನ್ನಡ ( ಅಖಿಲ ಭಾರತ 62ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಿಚಂಚಿಕೆ) , 1991ರ ಕಾವ್ಯ ( ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ), ಅಂಬಿಗರ ಚೌಡಯ್ಯ ( ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ),ವಿಮೋಚನೆ ( ಹೈದ್ರಾಬಾದ ಕರ್ನಾಟಕ ಸ್ವಾತಂತ್ರ್ಯ ಹೋರಾಟದ ಕೊಪ್ಪಳ ಜಿಲ್ಲೆಯ ಕಥನ ), ಬೆಳಕು ಬಂತು ಬಯಲಿಗೆ ( ಶ್ರೀ ಸಿದ್ದಲಿಂಗೇಶ್ವರ ಬುಕ್ ಡೀಪೋದ ಬೆಳ್ಳಿ ಹಬ್ಬದಲ್ಲಿ ತಂದ ಹೈ.ಕ ಪ್ರಾತಿನಿಧಿಕ ಕವನ ಸಂಕಲನ) , ಕೊಪ್ಪಳ ಜಿಲ್ಲಾ ದರ್ಶನ ( ಗು.ವಿ.ಗು. ಬೆಳ್ಳಿಮಾಲಿಕೆಯಲ್ಲಿ ), ಬಿ.ಎ.ಪ್ರಥಮ ಐಶ್ಛಿಕಕ್ಕೆ ಪಠ್ಯವಾಗಿದ್ದ ಕಾವ್ಯಸುಮ , ಬಿ.ಎಸ್ಸಿ. ಪ್ರಥಮಕ್ಕೆ ಪಠ್ಯವಾಗಿರುವ ನಮ್ಮ ಬೆಳಕು.

ಅಂಕಣ ಬರಹ : ಕೊಪ್ಪಳದಿಂದ ಪ್ರಕಟವಾಗುವ ತಳಮಳ ವಾರಪತ್ರಿಕೆಗೆ ಪ್ರಚಲಿತ ಹೆಸರಿನ ಅಂಕಣಕ್ಕೆ ಅಂಕಣಕಾರ

ಸಂಘಟನೆ : ಎರಡು ಸಲ ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕನಾಗಿ ಕಾರ್ಯ. ತುಂಗಭದ್ರ  ಉಳಿಸಿ ಹೋರಾಟ ಸಮಿತಿ ಸದಸ್ಯ,  ಕೋಮು ಸೌಹಾರ್ಧ ಸಮಿತಿ ಸದಸ್ಯ.

ಸದಸ್ಯತ್ವ : ಚಂಪಾ  ಅಧ್ಯಕ್ಷರಾಗಿದ್ದಾಗ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯನಾಗಿ ಕಾರ್ಯ . ಡಾ.ಗುರುಲಿಂಗ ಕಾಪಸೆಯವರು ಕರ್ನಾಟಕ ಸಾಹಿತ್ಯ ಅಕಾಡೆಮಿ  ಅಧ್ಯಕ್ಷರಾಗಿದ್ದಾಗ ಸದಸ್ಯನಾಗಿ ಕಾರ್ಯ .ಕರ್ನಾಟಕ ನಾಟಕ ಅಕಾಡೆಮಿಯ ಜಿಲ್ಲಾ ಸಂಚಾಲಕ.

ಹೋರಾಟ : ಗೋಕಾಕ ಸಮಿತಿ ಹೋರಾಟ, ಕುದರಿಮೋತಿ ಹೋರಾಟ, ಕೊಪ್ಪಳ ಜಿಲ್ಲಾ ಹೋರಾಟಗಳನ್ನು ಕಾರ್ಯದರ್ಶಿಯಾಗಿ ಸಂಘಟಿಸಿದ್ದು.

ಬಹುಮಾನ : ಕುದರಿಮೋತಿ ಮತ್ತು ನೀಲಗಿರಿ ಕೃತಿಗೆ ಗುಲ್ಬರ್ಗಾ ವಿ.ವಿ.ಯಿಂದ 2000 ರೂ. ಸಹಾಯಧನ.

                 ಕೆಡಹಬಲ್ಲರು ಅವರು ಕಟ್ಟಬಲ್ಲೆವು ನಾವು ಕೃತಿಗೆ ಅಂದಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶರಣಗೌಡರು ತಮ್ಮ ತಾಯಿಯ ಸ್ಮರಣೆಗೆ ನೀಡಿದ ಬಹುಮಾನ 1000 ರೂ.

ಹವ್ಯಾಸಗಳು :  ಪ್ರವಾಸ , ಫೋಟೋಗ್ರಾಫಿ

ಪ್ರಶಸ್ತಿ : ಕನ್ನಡ ಕ್ರಿಯಾ ಸಮಿತಿ ಶಕ್ತಿನಗರದಿಂದ ರಾಜ್ಯೋತ್ಸವ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಸಾಹಿತ್ಯ  ಪ್ರಶಸ್ತಿ /ಕಾವ್ಯ ಪ್ರಶಸ್ತಿ.ವಿಶ್ವೇಶ್ವರಯ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ಗೌರವ ಪುರಸ್ಕಾರ ( ( ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ),ಕಲಾವಿಕಾಸ ಪರಿಷತ್ತಿನ ಸುವರ್ಣ ಕರ್ನಾಟ ರಾಜ್ಯ ಪ್ರಶಸ್ತಿ, ವರಕವಿ ಡಾ. ದ.ರಾ.ಬೇಂದ್ರೆ ಕಾವ್ಯ ಪುರಸ್ಕಾರ  ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಚೆನ್ನೈದಿಂದ ಕನ್ನಡ ಸಾಹಿತ್ಯ ಸೇವೆಗೆ ಸನ್ಮಾನ , ಪದಕ.

 

 

ಅಲ್ಲಮಪ್ರಭು ಬೆಟ್ಟದೂರು  Allamaprabhu Bettadhuru

ಅಲ್ಲಮಪ್ರಭು ಬೆಟ್ಟದೂರು