ಮಾಹಿತಿ/Information

ಶ್ರೀ ಗವಿಸಿದ್ದೇಶ್ವರ ಮಠ

Sri Gavisiddeshwar Mat

ರಾಜಕೀಯ ವ್ಯಕ್ತಿಗಳು Poliiticians

ವೈದ್ಯರು/ಆಸ್ಪತ್ರೆಗಳು

Doctors/Hospital

ಗುತ್ತಿಗೆದಾರರುContractors

ನಮ್ಮ ಸಾಧಕರು Achievers

ಪತ್ರಿಕೆಗಳು/ಪತ್ರಕರ್ತರು

Press/Journalist

ಸಾಹಿತಿಗಳು Writers

ಕಲಾವಿದರುArtists

ಸಂಘ ಸಂಸ್ಥೆಗಳು Organisations

ಸಿನಿಮಾ ಮಂದಿರಗಳು Cinema

ವಕೀಲರು Advocates

ಶಿಕ್ಷಣ ಸಂಸ್ಥೆಗಳು/

Educational Institutes

ಅಂಗಡಿಗಳು/Shops

 ತರಬೇತಿ ಕೇಂದ್ರಗಳು

Training Centers

ಉರ್ದು ಕವಿಗಳು /Urdu Poets

ಫೋಟೋಸ್ಟುಡಿಯೋಗಳು

/Photo Studios

ಫ್ಯಾಕ್ಟರಿಗಳು/Factories

ಉದ್ಯಮಿಗಳು/ಉದ್ಯಮಗಳು Industrialist/Industries

ಹೋಟೆಲ್/ಲಾಡ್ಜ್ / ಕಲ್ಯಾಣಮಂಟಪ/Hotel /Lodge

ಪ್ರಿಂಟಿಂಗ ಪ್ರೆಸ/ಜೇರಾಕ್ಸ್ ಟೈಪಿಂಗ್ Printing Press/Xerox/typing

 ಎನ್ ಜಿ ಓಗಳು/NGOs

ಸೇವಾ ಸಂಸ್ಥೆಗಳು/Service Centers

 ಪ್ರಮುಖ ದೂರವಾಣಿ ಸಂಖ್ಯೆಗಳು/Important Phone Numbers

Text Box: ಗಿಡಗಂಟೆಗಳ  ಕರುಳಿನ ಹಾಡು
ಹಸಿದ  ಒಡಲುಗಳಿಗೆ
ಕುಸಿದ ಮನ ಮನೆಗಳಿಗೆ
ಕೊರಳ ದನಿಗಳಿಗೆ
ಓಗೂಡಿ,
ಭೂಶೃಂಗ ಸಭೆಯ
ಶೋಭೆಯ ಮೇಲೆ
ಕೂಡದಿರಲಿ ಗೂಬೆ 

ಕೂಗಿಕೊಳ್ಳಲಿ 
ಕೋಗಿಲೆ
ಮಾವು ಬೇವುಗಳ ಸಸ್ಯ
ಸಾಮ್ರಾಜ್ಯದ ಮೇಲೆ
ಕುಣಿಯಲಿ ನವಿಲುಳು
ಹಸಿರು ವನಸಿರಿಯ
ಗಿರಿಸಾಲು ಬೆಟ್ಟಗಳ ಮೇಲೆ

ಹಗಲು ಮುಗಿಲು
ರಾತ್ರಿ ಧಾತ್ರಿ ಸಾಕ್ಷಿಯಾಗಿ
ಕೊಲ್ಲದಿರಿ ಸಸ್ಯಶ್ಯಾಮಲೆಯ
ಸಿರಿಸಂತಾನದಂಗಾಂಗ
ಮರಗಿಡಗಳಣ
ನಾಡಗುಡಿ ಗೋಪುರ ಶಿಲೆಸಾಕ್ಷಿಯಾಗಿ

 ಇಳಿದು ಮಣ್ಣಿನಾಳದ
ಬೇರುಗಳ ಕತೆ ವ್ಯಥೆಗಳ
ನೀರಿಲ್ಲದ ಹಾಡು
ನಿಸ್ಸಾರ ಬಂಜರು ಭೂಮಿಯ ಪಾಡು
ಜಲಬತ್ತಿಹೋದ  ಈ ಮಣ್ಣ ಹಾಡು

ಹಸಿದ  ಒಡಲುಗಳಿಗೆ
ಕುಸಿದ ಮನ ಮನೆಗಳಿಗೆ
ಓಗೊಡಿ,
ಭೂಶೃಂಗ ಸಭೆಯ
ಶೋಭೆಯ ಮೇಲೆ
ಕೂಡದಿರಲಿ ಗೂಬೆ 

ಟಿಸಿಲೊಡೆದ
ಟೊಂಗೆ ಟೊಂಗೆಗಳ ಬೋಳು
ಹಾಳಾದ ಎಲೆಹೂಕಾಯಿಗಳು
ನಿಲ್ಲಲಿ ಕಡಿಯುವ ಕುಸಂಸ್ಕೃತಿ
ಬೆಳೆಯಲಿ ಬೆಳೆಸುವ ಸಂಸ್ಕೃತಿ

ನಾವು ಉಣ್ಣುವ ಅನ್ನ
ಕುಡಿಯುವ ನೀರು
ಉಸಿರುವ ಗಾಳಿ
ನೋಡುವ ಬೆಳಕು
 ಉಳಿಯಲಿ ನಿರಂತರ
ಆಗದಿರಲಿ ಸ್ಥಿತ್ಯಂತರ

ನೋಡಲ್ಲಿ ಈ ನೆಲದಾಯಿಯ ಪಾಡು
ಎದೆಯೊಳಿಲ್ಲ ಕಾಮಧೇನುವಿನ ಹಾಲು
 ಇಲ್ಲ ಕಲ್ಪವೃಕ್ಷದ ನೆರಳು
ಬಿಗಿದಿರಲು ವಿಷ ಬಳ್ಳಿಗಳಿಂದಿವಳ ಕೊರಳು
ವಿಷವೃಕ್ಷದಿಂದವಳ ಕರಳು
ಹಸಿದ  ಒಡಲುಳಿಗೆ
ಕುಸಿದ ಮನ ಮನೆಗಳಿಗೆ
ಗಿಡಗಂಟೆಗಳ ಕೊರಳದನಿಗಳಿಗೆ
ಓಗೂಡಿ.

- ದಿ.ಗವಿಸಿದ್ಧ   ಎನ್.ಬಳ್ಳಾರಿ
Text Box: ನಗುವಳೆಂದು ನೆಲದಾಯಿ !
ಬಾಗಿದ ಬತ್ತಲೆ ಬೆನ್ನ ಮೇಲೆ
ಬರೆ ಎಳೆವ ಸುಡುಸುಡುವ ಸೂರ್ಯ
ಹೃದಯ ಮಂಚಗಳ ಮೇಲೆ
ತಲೆಗಳ ನಂದಿಕೋಲಿನ ಕುಣಿತ
ಏನಾದರೇನು ತಂಪುಮಟಾಗಲಿಲ್ಲ

ಹಿಂದೊಮ್ಮೆ ಹೊಳೆವ ಚಕಚಕ ಚಿಕ್ಕಿ
ಕಾಣುತಿವೆ ಅಳುವಂತೆ ಬಿಕ್ಕಿ ಬಿಕ್ಕಿ
ಗುಡುಗು ಸಿಡಿಲಾದ ಮಾತುಗಳು
ಮೌನ ಮೀರುವ ಮೌಲ್ಯ ಹೊಂದಲಿಲ್ಲ

ಉತ್ತರದದ ತುಂಬೆಲ್ಲ ನೆತ್ತರದ ಕುಯ್ಲು
ದಕ್ಷೀಣದ ನೀರೆಯರ ನೀರಿನ ಅಳಲು
ಕಾಶ್ಮೀರದ ಶಾಲಿಮಾರು ತುಂಬ ಮುಳ್ಳು
ಅರಳುವವೆಂದೋ  ಮಲ್ಲಿಗೆ ಅರಳು 

ಮಡಿಲಲ್ಲಿ ಕಾಡು ಕಡಿಯುವ ವೀರರು
ಒಡಲಲ್ಲಿ ನಾಡು ಕಡಿಯವ ಧೀರರು
ಕುಂಡಗೆ ಕುರ್ಚಿ ಕಟ್ಟಿಕೊಂಡ ಸ್ಕೇಟಿಂಗ್ ಶೂರರು
ದಿನ ದಿನ ಬೆಳೆವ ರಕ್ತ ಬೀಜಾಸುರರು!

ಹಾದಿ ಹಾದಿಗೂ ಹಸಿರು ಹಾಸೆ ತುಂಬಿ
ನಡೆಯುವಂತಿಲ್ಲ  ಕಸುವಿಲ್ಲದ ತಾಯಿ
ನಗುವಳೆಂದೊ ಈ ನೆಲದಾಯಿ
			= ಎ.ಎಂ.ಮದರಿ

Text Box: ಅಂತರ
ಬಾಪೂ
ನೀನಂದು ಹೇಳಿದ್ದಿ
ಸರ್ವರಿಗೂ ಸಮಪಾಲು
ಸರ್ವರಿಗೂ ಸಮಬಾಳು
ಈಗ ಅದು ಎಲ್ಲಿದೆ?
ನಿನ್ನನೇ
ಬಂಡವಾಳವಾಗಿರಿಸಿಹ
ಅವರು ಹೊಂದಿಹರು ಮಹಲು,
ನಿನ್ನವರು ಹೊಂದಿಹರು ಗುಡಿಸಲು
ಮಹಲ ಮೇಲೆ ಮಹಲು
ಚಡ್ಡಿ ಬಿಚ್ಚಿದರೂ 
ಅರಿವಾಗದಷ್ಟು
ಅಮಲು....!

 ಇತ್ತ ನಿನ್ನವರು
ಅರೆಗಂಜಿ ಇಲ್ಲದೇ
ಗುಳಿಬಿದ್ದ ಕಣ್ಣು
ಶಕ್ತಿ ಇಲ್ಲದೇ ತೂರಾಡುವ ದೇಹ

ಅತ್ತ
ಕೊಬ್ಬಿದ ಗೂಳಿಯ ಹಾಗೆ
ಉಬ್ಬಿದ ಮೈ
ಕೊಬ್ಬನು ಇಳಿಸಲು
ಔಷಧಿ ಮತ್ತೆ !

ಇತ್ತ ಬೆನ್ನಿಗೆ ಹತ್ತಿದ ಮೈ
ಅರಲು ಮೆತ್ತಿದರೂ
ಸಮವಾಗದಷ್ಟು
ತಗ್ಗು-ದಿನ್ನೆ
-ವೀರಣ್ಣ ವಾಲಿ

KOPPAL DIST COMPLETE INFORMATION AND NEWS

ಮಕ್ಕಳು

ಒಣ ಕಟ್ಟಿಗೆಗೆ

ಕಿಡಿತಾಕಿ

ಉರಿಕಾರಿ

ಬೆಂಕಿ ಆರಿದ

ಇದ್ದಿಲು!

-ವೀರಣ್ಣ ವಾಲಿ

CONTACT US:      kannadanet.com Karishma Digital studio jawahar road, Koppal-583 231.ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail:   kannadanet@gmail.com,