|
CONTACT US: kannadanet.com Karishma Digital studio jawahar road, Koppal-583 231 ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail: kannadanet@gmail.com,sirajbisaralli@in.com |
|
ಮುಖಪುಟ ಪ್ರತಿಸ್ಪಂದನೆ ನಮ್ಮನ್ನು ಸಂಪರ್ಕಿಸಿ |
|
KOPPAL DIST COMPLETE INFORMATION AND NEWS |
|
ಕನ್ನಡನೆಟ್.ಕಾಂ |
|
Kannadanet.com |
|
ಸಂಸ್ಕೃತ ಹಾಗೂ ಆಯುರ್ವೇದದಲ್ಲಿ ಅಪಾರ ಪಾಂಡಿತ್ಯದ ಪೂಜ್ಯರು ಆಯುರ್ವೇದ ಪದ್ದತಿಯ ಪುನರುಜ್ಜೀವನ ಹಾಗೂ ಬಡಜನತೆಗೆ ಉಚಿತ ಆರೋಗ್ಯ ವ್ಯವಸ್ಥೆಯ ಉದ್ದೇಶಗಳಿಂದ ಆರು ಕೋಟಿ ರೂಪಾಯಿ ಅಂದಾಜು ವೆಚ್ಚದ ಮಹಾತ್ವಾಕಾಂಕ್ಷಿತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯವನ್ನು ಆರಂಭಿಸಿದರು. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯವನ್ನು ವಿಶ್ವವಿದ್ಯಾಲಯ ಸಂಶೋಧನೆ ಕೇಂದ್ರ ಹಾಗೂ ವ್ಯಾಸಂಗ ವಿಸ್ತರಣಾ ಕೇಂದ್ರದ ಹಂತಕ್ಕೆ ಎತ್ತರಿಸಿ ಅದನ್ನು ಈ ನಾಡಿನ ಆಯುರ್ವೇದ ಕಾಶಿಯನ್ನಾಗಿ ರೂಪಿಸಬೇಕೆಂಬೆಂಬ ಘನ ಸಂಕಲ್ಪ ಅವರದಾಗಿತ್ತು ಅದಕ್ಕಾಗಿ ತಮ್ಮ ಕೊನೆಯ ಉಸಿರಿನವರೆಗೂ ಅವರು ಅವಿರತವಾಗಿ ಶ್ರಮಿಸಿದರು. ಅಭಿವೃದ್ಧಿಯ ಹರಿಕಾರರಾದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು : ಶ್ರೀ ಮ.ನಿ.ಪ್ರ.ಜ. ಶಿವಶಾಂತವೀರ ಮಹಾಸ್ವಾಮಿಗಳ ಶಿಷ್ಯರು, ಶಿಕ್ಷಣ ಪ್ರೇಮಿಗಳು, ಉತ್ತಮ ವಾಗ್ಮಿಗಳು, ಆಧ್ಯಾತ್ಮಿಕರು, ನಡೆದಾಡುವ ದೇವರೆನಿಸಿದ್ದ ಸಾಕ್ಷಾತ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಪ್ರತಿರೂಪರೆನಿಸಿಕೊಂಡಿರುವ ಶ್ರೀ ಮ.ನಿ.ಪ್ರ.ಜ. ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಗವಿಮಠ ಪರಂಪರೆಯ ೧೮ನೇ ಪೀಠಾಧಿಪತಿಗಳಾಗಿ ಈ ಪುಣ್ಯ ತಪೋಭೂಮಿಗಿಳಿದಿದ್ದಾರೆ.ಇವರ ಮೂಲ ಹೆಸರು ಶ್ರೀಶ್ರೀಶ್ರೀ ಪರ್ವತದೇವರು. ಇವರು ಗುಲರ್ಗಾ ಜಿಲ್ಲೆಯ ಹಾಗರಗುಂಡಿಗೆ ಗ್ರಾಮದ ವೀರಮಹೇಶ್ವರ ದಂಪತಿಗಳಾದ ನೀಲಯ್ಯ ಹಾಗೂ ಈರಮ್ಮ ಇವರ ಪುಣ್ಯಗರ್ಭದಲ್ಲಿ ೧-೬-೧೯೭೭ ರಲ್ಲಿ ಈ ಧರೆಗಿಳಿದರು. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಪೂರೈಸಿದ ಪರ್ವದೇವರು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಹಾಗೂ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಬಿ.ಎ. ವರೆಗೂ ಓದಿ ಬಿ.ಎ. ಪದವಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಂಕ್ ಗಳಿಸಿದರು. ನಂತರ ಎಂ.ಎ. ಇಂಗ್ಲೀಷ ಸ್ನಾತಕೊತ್ತರ ಪದವಿಯನ್ನು ಪೂನಾ ವಿಶ್ವವಿದ್ಯಾಲಯದಿಂದ, ಎಂ.ಎ. ಫಿಲಾಸಫಿಯನ್ನು ಪೂನಾ ವಿಶ್ವವಿದ್ಯಾಲಯದಿಂದ ಗಳಿಸುವುದರ ಜೊತೆಗೆಗೆ ಸಂಸ್ಕೃತ ಅಧ್ಯಯನವನ್ನು ಕೂಡಾ ಮಾಡಿದ್ದಾರೆ.ವಿದ್ವತ್ತು, ವಾಕ್ ಪ್ರತಿಭೆ, ಚಿಂತನಶೀಲತೆ, ಸೃಜನಶೀಲತೆ, ಶೈಕ್ಷಣಿಕಣ ಚಿಂತನೆ ಹಾಗೂ ಪ್ರಗತಿಪರ ಧೋರಣೆಯ ಪೂಜ್ಯ ಶ್ರೀ ಗಳು ತಮ್ಮ ಗುರುಗಳ ಸಮಸ್ತ ಸಂಕಲ್ಪಗಳನ್ನು ಸಾಕಾರಗೊಳಿಸಲು ಹಾಗೂ ಶ್ರೀ ಮಠದ ಪವಿತ್ರ ಪರಂಪರೆಯನ್ನು ಉಳಿಸಿ ಬೆಳೆಸಲು ತಾವು ಗುರುಕೃಪೆಯಿಂದ ನಿಯೋಜಿತಗೊಂಡ ಶ್ರೀ ಮಠದ ನಮ್ರಸೇವಕನೆಂಬ ಆಪ್ತಧೋರಣೆ ಹಾಗೂ ಅಚಲ ನಿಷ್ಠೆ ಹೊಂದಿದ್ದಾರೆ. ತಮ್ಮ ಪೂಜ್ಯ ಗುರುಗಳ ಆಶಯಗಳನ್ನು ಈಡೇರಿಸುವ ಪವಿತ್ರ ಕಾರ್ಯಕ್ಕೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವ ಪೂಜ್ಯರು ಪೀಠಾರೋಹಣಗೊಂಡ ನಾಲ್ಕು ವರ್ಷಗಳ ಅವದಿಯಲ್ಲಿ ಸಾಧಿಸಿದ ಸಾಧನೆ ಪ್ರಶಂಸಾರ್ಹ.ಅಪೂರ್ಣ ಹಂತದಲ್ಲಿದ್ದ ತಮ್ಮ ಪೂಜ್ಯ ಗುರುಗಳ ಸಂಕಲ್ಪದ ಆಯುರ್ವೇದ ಮಹಾವಿದ್ಯಾಲಯದ ಕಟ್ಟಡವನ್ನು ಕೇವಲ ಒಂದು ವರ್ಷದಲ್ಲಿ ಪೂರ್ತಿಗೊಳಿಸಿ ಅದೇ ಮಹಾವಿದ್ಯಾಲಯದ ಭವ್ಯ ಆವರಣದಲ್ಲಿ ತಮ್ಮ ಪೂಜ್ಯ ಗುರುಗಳ ಪ್ರಥಮ ಪುಣ್ಯ ಸ್ಮರಣೆಯನ್ನು ಅರ್ಥಪೂರ್ಣವಾಗಿ ಜರುಗಿಸಿದುದು ಅವರ ಗುರುಭಕ್ತಿ ಹಾಗೂ ಕ್ರಿಯಾಶಕ್ತಿಗೆ ಸಾಕ್ಷಿಯಾಗಿದೆ. ಶಿವಶಾಂತವೀರ ಮಹಾಸ್ವಾಮಿಗಳ ದ್ವಿತೀಯ ಪುಣ್ಯಸ್ಮರಣೆ ಆಂಗವಾಗಿ ಕೊಪ್ಪಳ ತಾಲೂಕಿನಲ್ಲಿ ೨೩ ದಿನಗಳ ಸದ್ಭಾವಯಾತ್ರೆ ಹಮ್ಮಿಕೊಂಡು ಪ್ರತಿ ಹಳ್ಳಿಯಲ್ಲಿ ಬೆಳಿಗ್ಗೆ ಮಠದ ಆಯುರ್ವೇದ ವೈದ್ಯರ ಮೂಲಕ ೩೫೫೦ ಮಹಿಳೆಯರ, ೩೨೫೦ ಪುರುಷರ ಹಾಗೂ ೧೬೮೬ ಮಕ್ಕಳು ಸೇರಿದಂತೆ ಒಟ್ಟು ೮೪೮೬ ಜನರಿಗೆ ವಿವಿಧ ರೋಗಗಳ ಬಗ್ಗೆ ಉಚಿತ ಚಿಕಿತ್ಸೆ ಹಾಗೂ ಒಂದು ಲಕ್ಷ ಹತ್ತು ಸಾವಿರ ರೂಪಾಯಿಗಳ ಔಷಧ ವಿತರಿಸಿ ಆಯಾ ಗ್ರಾಮದಲ್ಲಿ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿರಿ ಎಂದು ಆಶೀರ್ವಚನದಲ್ಲಿ ಹೇಳುತ್ತಿದ್ದರು. ಪ್ರತಿದಿನ ಸಂಜೆ ಧಾರ್ಮಿಕ ಸಭೆ ಏರ್ಪಡಿಸಿ ಪ್ರತಿಯೊಂದು ದಿನವೂ ಒಬೊಬ್ಬ ಅತಿಥಿಗಳನ್ನು ಕರೆಯಿಸಿ ಉಪನ್ಯಾಸ ಮಾಡಿಸಲಾಗುತ್ತಿತ್ತು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ದಿನಾಂಕ : ೧-೭-೨೦೦೫ ರಂದು ೧೦೦೦ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಪ್ರಸಾದ ನಿಲಯಕ್ಕೆ ತುಮಕೂರ ಸಿದ್ದಗಂಗಾ ಮಠದ ಡಾ|| ಶಿವಕುಮಾರ ಮಹಾಸ್ವಾಮಿಗಳು ಶಂಕುಸ್ಥಾಪನೆ ನೆರವೇರಿಸಿದರು. ಮುಂಡರಗಿ ಅನ್ನದಾನೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಯೋಜನಾ ಖಾತೆ ರಾಜ್ಯ ಸಚಿವ ಎಂ.ವಿ. ರಾಜಶೇಖರ ಕಾರ್ಯಕ್ರವನ್ನು ಉದ್ಘಾಟಿಸಿದರು. ಅಂದು ಸಂಜೆ ಕೊಪ್ಪಳದ ಗವಿಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವದ ನಿಮಿತ್ಯ ವರ್ಷವಿಡೀ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡು ಅದರ ಉದ್ಘಾಟನೆಗೆ ರಾಷ್ಟ್ರಪತಿ ಡಾ|| ಎ.ಪಿ.ಜೆ. ಅ ಕಲಾಂ ರನ್ನು ಆಹ್ವಾನಿಸಲು ನಿರ್ಧರಿಸಿದರು.೧-೬-೨೦೦೫ ರಂದು ಶಿವಶಾಂತವೀರ ಪೂರ್ವ ಪ್ರಾಥಮಿಕ ಶಾಲೆಯನ್ನು ಆರಂಭಿಸಿದರು.ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಇಚ್ಛೆಯಂತೆ ಮಠದ ಗುಡ್ಡದ ಬಳಿಯಲ್ಲಿ ಗುರು ಗವಿಸಿದ್ದೇಶ್ವರ ಸಸ್ಯಧಾಮ ನಿರ್ಮಿಸಿದರು. ಇಲ್ಲಿ ಮಧುಮೇಹ ಸೇರಿದಂತೆ ಹಲವು ರೋಗಗಳಿಗೆ ನಿಸರ್ಗದತ್ತ ಪರಿಹಾರ ಈಗ ಲಭ್ಯವಾದಂತಾಗಿದೆ. ಇದು ಶ್ರೀಳಿಗೆ ಇರುವ ಹಸಿರುಪರ ಕಾಳಜಿ ಹಾಗೂ ಆಯುರ್ವೇದದ ಬಗ್ಗೆ ಇರುವ ಅಪಾರ ಕಾಳಜಿಯನ್ನು ತೋರಿಸುತ್ತದೆ. ಸಸ್ಯಧಾಮದಲ್ಲಿ ನಾಲ್ಕುವರೆ ಸಾವಿರ ಸಸ್ಯಗಳಿವೆ. ಈ ಸಸ್ಯಧಾಮ ದಿನದಿಂದ ದಿನಕ್ಕೆ ಜನರ ಪ್ರೀತಿಗೆ ಪ್ರಾಪ್ತವಾಗುತ್ತಲಿದೆ. ವಿವಿಧ ಭಾಗಗಳಿಂದ ಇಲ್ಲಿಗೆ ಜನ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆಯ ಸುವರ್ಣ ಮಹ್ಕೋವದ ನಿಮಿತ್ಯ ವರ್ಷವಿಡೀ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿ ೨೭-೧೧-೨೦೦೫ ರಂದು ಮೂಡಬಿದಿರೆಯ ಅರವಿಂದ ಚೊಕ್ಕಾಡಿ ಅವರಿಂದ ಸ್ವಾತಂತ್ರೋತ್ತರ ಶಿಕ್ಷಣದ ಮೌಲ್ಯಮಾಪನ ಶಿಕ್ಷಣ ತಜ್ಞ ಟಿ.ವಿ. ಮಾಗಳದ ಅವರಿಂದ ಇಪ್ಪತ್ತೊಂದನೆಯ ಶತಮಾನಕ್ಕಾಗಿ ಶಿಕ್ಷಣ, ಬೆಂಗಳೂರಿನ ಲಿಂಗದೇವರು ಹಳೇಮನಿ ಅವರಿಂದ ಭವಿಷ್ಯದ ಶಿಕ್ಷಕ ಮತ್ತು ಪಠ್ಯಪುಸ್ತಕ ಎಂಬ ಉಪನ್ಯಾಸ ಏರ್ಪಡಿಸಿದರು. ವಿಜಾಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಗಳು ಅಧ್ಯಕ್ಷತೆ ವಹಿಸಿದ್ದರು. ಗೋ ಹತ್ಯೆ ತಡೆದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು : ಸಂಪ್ರದಾಯಕ್ಕೆ ಜೋತು ಬಿದ್ದು ಗೋಹತ್ಯೆಗೆ ನಿರ್ಧರಿಸಿದ್ದ ಕೊಪ್ಪಳ ತಾಲೂಕಿನ ಹೊಸ ಗೊಂಡಬಾಳ ಗ್ರಾಮಸ್ಥರ ನಿರ್ಧಾರವನ್ನು ಬದಲಿಸಿ ಗೋಹತ್ಯೆಯನ್ನು ತಡೆದರು. ಗ್ರಾಮದ ದೇವತೆ ಕರಿಯಮ್ಮನಿಗೆ ಆಕಳು ಬಿಟ್ಟು ಕೆಲ ವರ್ಷಗಳ ನಂತರ ಅದರ ಚರ್ಮದಿಂದ ಐದು ಜೋಡಿ ಪಾದುಕೆ ಮಾಡಿ ಪೂಜೆ ಮಾಡುವುದು ಹಿಂದಿನಿಂದಲೂ ಆಚರಣೆಯಲ್ಲಿದ್ದ ಸಂಪ್ರದಾಯ. ಅಂತೆಯೇ ಗೋಹತ್ಯೆಗೆ ನಿರ್ಧರಿಸಿದ್ದರು. ಆಕಸ್ಮಿಕವಾಗಿ ಗ್ರಾಮಕ್ಕೆ ಭೇಟಿ ನೀಡಿದ್ದ ಶ್ರೀಗಳು ಗೋಹತ್ಯೆಯ ವಿಷಯ ತಿಳಿದು ಗ್ರಾಮಸ್ಥರನ್ನು ಸಭೆ ಸೇರಿಸಿ ಗೋಹತ್ಯೆ ಮಹಾಪಾಪ ಎಂದು ಮನವೊಲಿಸಿ ಕಟ್ಟಿಗೆಯ ೫ ಜೊತೆ ಪಾದುಕೆ ಮಾಡಿಸಿ ಕೊಡುವುದಾಗಿ ಹೇಳಿದಾಗ ಶ್ರೀಗಳವರ ಮಾತಿಗೆ ಗೌರವ ನೀಡಿ ಕಟ್ಟಿಗೆ ಪಾದುಕೆಗೆ ಒಪ್ಪಿಗೆ ಸೂಚಿಸಿದರು. ಗವಿಮಠಕ್ಕೆ ಗೊ.ರು.ಚ. ಆಗಮನ :ಶಿವಶಾಂತವೀರ ಮಹಾಸ್ವಾಮಿಗಳ ಮೂರನೇ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಆಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೊ.ರು.ಚನ್ನಸಪ್ಪನವರು ಆಗಮಿಸಿ ಆಧುನಿಕ ಜಗತ್ತಿಗೆ ಆಧ್ಯಾತ್ಮಿಕ ಮೌಲ್ಯಗಳು ವಿಷಯ ಕುರಿತು ಉಪನ್ಯಾಸ ನೀಡಿದರು. |
|
ಶ್ರೀ ಗವಿಸಿದ್ಧೇಶ್ವರ ಮಠ |
|
ಅಲ್ಪ ಅವಧಿಯಲ್ಲಿ ದೀರ್ಘ ಸಾಧನೆ ಮಾಡಿದ ಶ್ರಿ ಅಭಿನವ ಗವಿಸಿದ್ಧೇಶ್ವರ ಮಹಸ್ವಾಮಿಗಳು : ಅತಿ ಚಿಕ್ಕ ವಯಸ್ಸಿನಲ್ಲಿಯೇ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡ ಕೆಲವೇ ವರ್ಷಗಳಲ್ಲಿಯೇ ಮಠದ ಚಿತ್ರಣವನ್ನೇ ಬದಲಿಸಿದ ಕೀರ್ತಿ ಇವರದ್ದು. ಇವರು ಪೀಠಾಧಿಪತಿ ಗಳಾಗುವ ಮುಂಚಿನ ಗವಿಮಠಕ್ಕೂ ಈಗಿರುವ ಮಠಕ್ಕೂ ಅಜಗಜಾಂತರ ಬದಲಾವಣೆಯಾಗಿದೆ.ಅತ್ಯಂತ ದೊಡ್ಡ ಗ್ರಂಥಾಲಯ ತೆರೆಯಬೇಕೆಂಬ ಕನಸಿನಿಂದ ಪುಸ್ತಕ ಜೋಳಿಗೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಅಪರೂಪದ ಗ್ರಂಥಗಳನ್ನೊಳಗೊಂಡ ಬೃಹತ್ ಗ್ರಂಥಾಲಯ ಯೋಜನೆ ಪೂಜ್ಯರದ್ದಾಗಿದೆ. ಮಳೆಮಲ್ಲೇಶ್ವರ ದೇವಸ್ಥಾನದ ಗುಡ್ಡದಲ್ಲಿ ಮೂರು ಸಾವಿರ ಸಸಿ ನೆಡುವ ಮೂಲಕ ಹಸಿರು ಕ್ರಾಂತಿಗೆ ಮುಂದಾಗಿದ್ದಾರೆ. ಶ್ರೀ ಅಭಿನವ ಗವಿಸಿದ್ದೇಶ್ವರ ಮಹಸ್ವಾಮಿಗಳ ಆಸ್ಟೇಲಿಯಾ ಪ್ರವಾಸ : ಸದಾ ಕ್ರಿಯಾಶೀಲರಾಗಿರುವ ಶ್ರೀ ಗಳು ಕೊಪ್ಪಳ ಜಿಲ್ಲೆಯಲ್ಲಿ ಶ್ರೇಷ್ಠ ಗುಣಮಟ್ಟದ ಅದರಲ್ಲೂ ಅಂರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮಹದಾಸೆಯನ್ನು ಹೊಂದಿದ್ದಾರೆ. ಆ ದಿಶೆಯಲ್ಲಿ ಈಗಾಗಲೇ ಸಾಕಷ್ಟು ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದಾರೆ. ವಿದೇಶದಲ್ಲಿನ ಶಿಕ್ಷಣ ಸಂಸ್ಥೆಗಳನ್ನು ಅಧ್ಯಯನ ಮಾಡಿ ಅದನ್ನು ಇಲ್ಲಿ ಅನುಸರಿಸುವ ಸಲುವಾಗಿ ಶ್ರೀ ಅಭಿನವ ಗವಿಸಿದ್ದೇಶ್ವರರು ಕೊಪ್ಪಳ ಗವಿಮಠದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಕೊಂಡ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇವರು ೧೬-೧೧-೨೦೦೬ ರಿಂದ ೬-೧೨-೨೦೦೬ ರ ವರೆಗೆ ಆಸ್ಟ್ರೇಲಿಯಾ ಪ್ರವಾಸ ಕೈಕೊಂಡರು. ಆಸ್ಟ್ರೇಲಿಯಾದ ಸುಪ್ರಸಿದ್ದ ಉತ್ತಮ ವಿಶಿಷ್ಠ ಶಾಲೆಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿ ಮೆಲ್ಬೋ ವಿಶ್ವವಿದ್ಯಾಲಯಗಳ ಪ್ರವಾಸವನ್ನು ಪೂರ್ಣಗೊಳಿಸಿ ಸಿಡ್ನಿಗೆ ಪ್ರಯಾಣ ಬೆಳೆಸಿ, ಅಲ್ಲಿಯ ಪ್ರಸಿದ್ದ ಸಿಡ್ನಿ ವಿಶ್ವವಿದ್ಯಾಲಯ, ಸಿಡ್ನಿ ಕೇವ್ಸ್ ಗೆ ಭೇಟಿ ನೀಡಿದರು. ಸಿಡ್ನಿಯಲ್ಲಿರುವ ಅನಿವಾಸಿ ಭಾರತೀಯರ ಬಸವಸಮಿತಿ ಏರ್ಪಡಿಸಿ ಸನ್ಮಾನ ಸ್ವೀಕರಿಸಿದರು.ನಂತರ ನ್ಯೂ ಸ್ಕೌವೇ ವಿಶ್ವವಿದ್ಯಾಲಯ ಭೇಟಿ ಮಾಡಿದರು. ಸಿಡ್ನಿಯಲ್ಲಿರುವ ಸುಪ್ರಸಿದ್ದ ಕ್ಯಾಥೋಲಿಕ್ ಶಾಲೆಗೆ ಭೇಟಿ ನೀಡಿ ಕೆಲಕಾಲ ಅಲ್ಲಿನ ಮಕ್ಕಳೊಂದಿಗೆ ಚರ್ಚಿಸಿ ಅಲ್ಲಿರುವ ಮಕ್ಕಳ ಪ್ರತಿಭೆ ಮತ್ತು ಅದರ ಅನಾವರಣಕ್ಕೆ ಆ ಶಾಲೆಯಲ್ಲಿ ಕೈಕೊಂಡಿರುವ ಯೋಜನೆಗಳು,, ಅದರ ಅಳವಡಿಕೆಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಮಕ್ಕಳೊಂದಿಗೆ ಮುಕ್ತ ಮನಸ್ಸಿನಿಂದ ಬೆರೆತರು. ೧) ಆಸ್ಟ್ರೇಲಿಯಾದಲ್ಲಿಯೇ ಎತ್ತರದ ರಿಯಾಲ್ಟೋ ಟವರ್ ಮೇಲೆ ವಿಹರಿಸಿದರು. ೨) ಮೆಲ್ಬೋರ್ನದಲ್ಲಿ ಕೊಪ್ಪಳದ ರವಿ ಬಳ್ಳೊಳ್ಳಿ ಎಂಬುವವರ ಮನೆಯಲ್ಲಿ ವಿಶ್ರಾಂತಿ ಪಡೆದರು. ರಾಯಲ್ ಮೆಲ್ಬೋ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಆರ್.ಎಂ.ಐ.ಟಿ.) ವಿಶ್ವವಿದ್ಯಾಲಯದಲ್ಲಿರುವ ಮುಂದುವರಿದ ಗಣಕಯಂತ್ರ ಗ್ರಂಥಾಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಡಾ|| ಸಾವಿತ್ರಿ ಬನ್ನಿಕೊಪ್ಪ ಹಾಜರಿದ್ದರು. ವಿಕ್ಟೋರಿಯಾ ಸ್ಟೇಟ್ ಗ್ರಂಥಾಲಯ, ರಾಯಲ್ ಪ್ರದರ್ಶನದ ಬೃಹತ್ ಕಟ್ಟಡ, ಅಲೆಗ್ಝಾಂಡರ್ ಉದ್ಯಾನವನಗಳಿಗೆ ಭೇಟಿ ನೀಡಿದರು. ಸಂಜಯ ಕೊತಬಾಳ, ಉಮೇಶ ಬಳ್ಳೊಳ್ಳಿ, ಜ್ಯೋತಿ ಳ್ಳೊಳ್ಳಿ, ಬಶ್ರೇಯಾ ಬಳ್ಳೊಳ್ಳಿ ಉಪಸ್ಥಿತರಿದ್ದರು. ೪) ಆಸ್ಟ್ರೇಲಿಯಾದ ವಿಶ್ವವಿದ್ಯಾಲಯದ ನೆmವP ಸಿಸ್ಟiನ ಮುಖ್ಯಸ್ಥ ಜಹೀg ರಿಯೊಂದಿಗೆ ಸಮಾಲೋಚಿಸಿದರು. ಆಸ್ಟ್ರೇಲಿಯಾ ಪ್ರವಾಸದ ಅನುಭವ ತೆರೆದಿಟ್ಟ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಸ್ವಾಮಿಗಳು : ಆಸ್ಟ್ರೇಲಿಯಾ ಪ್ರವಾಸದಿಂದ ಅಲ್ಲಿಯ ಶೈಕ್ಷಣಿಕ ವ್ಯವಸ್ಥೆ ತಿಳಿದುಕೊಳ್ಳಲು ಸಹಕಾರಿಯಾಯಿತು. ಅದನ್ನು ನಾವು ಯಥಾತ್ತಾಗಿ ಅಳವಡಿಸಿಕೊಳ್ಳುವುದು ಕಷ್ಟಕರ. ಆದರೆ ಅಭಿವೃದ್ದಿಯ ದೃಷ್ಠಿಯಲ್ಲಿ ಪ್ರಯೋಜನ ಪಡೆದುಕೊಳ್ಳಹುದು.ಆಸ್ಟ್ರೇಲಿಯಾದಲ್ಲಿ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿರುವ ಆಸಕ್ತಿಯನ್ನು ಗುರುತಿಸುವ ಕಾರ್ಯ ನಡೆಯ್ಕುದೆ. ವಿದ್ಯಾರ್ಥಿ ಯಾವ ಕ್ಷೇತ್ರದಲ್ಲಿ ಕಲಿಯಲು ಬಯಸುತ್ತಾನೋ ಆ ಕ್ಷೇತ್ರದ ಬಗ್ಗೆ ತರಬೇತಿ ಕೊಡುವ ಪದ್ದತಿ ಅಲ್ಲಿದೆ. ಹೀಗಾಗಿ ಮಕ್ಕಳು ತಮಗೆ ಆಸಕ್ತಿ ಇರುವ ವಿಷಯದಲ್ಲಿ ಪರಿಣಿತಿ ಹೊಂದುವುದರಿಂದ ಅವರ ಪ್ರತಿಭಾ ಅನಾವರಣಕ್ಕೆ ಅನುಕೂಲವಾಗುತ್ತದೆ. ಆಸ್ಟ್ರೇಲಿಯಾದ ಶಿಕ್ಷಣ ಪದ್ದತಿ, ಆರ್ಥಿಕ ಸ್ವಾವಲಂಬನೆ ಶ್ಲಾಘನೀಯವಾದದ್ದು, ಆದರೆ ಅಲ್ಲಿನ ಸಾಮಾಜಿಕ ಸಂಬಂಧಗಳು (ಭಾರತದಲ್ಲಿರುವಷ್ಟು ಗಟ್ಟಿಯಾಗಿಲ್ಲ) ಭಾರತದ ಸಂಬಂಧಗಳಾದ ಅಪ್ಪ, ಅಮ್ಮ, ಅಣ್ಣ, ತಂಗಿ ಅಜ್ಜ, ಅಜ್ಜ ಸೇರಿದಂತೆ ಕೌಟುಂಬಿಕ ಸಂಬಂಧಗಳು ಅಷ್ಟೊಂದು ಗಟ್ಟಿಯಾಗಿಲ್ಲ. ಗಂಡಾಗಿರಲಿ, ಹೆಣ್ಣಾಗಿರಲಿ ೧೮ ವರ್ಷದ ಬಳಿಕ ಮನೆ ಬಿಟ್ಟು ತೊಲಗಿ ಸ್ವಂತ ಬದುಕು ನಡೆಸಬೇಕು, ಇಲ್ಲದಿದ್ದರೆ ಅದು ಅವಮಾನ ಎಂಬ ಭಾವನೆ ಅಲ್ಲಿದೆ. ಕ್ರಿಯಾಶೀಲರಾಗಿರುವ ಆಸ್ಟ್ರೇಲಿಯಾದ ಜನ ಸದಾ ಒಂದಿಲ್ಲೊಂದು ಕೌಶಲ್ಯದಲ್ಲಿ ತೊಡಗಿರುತ್ತಾರೆ. ಅವರು ಸದಾ ಚಟುವಟಿಕೆಯಿಂದ ಇರುತ್ತಾರೆ. ಅಲ್ಲಿ ಪ್ರಾಮಾಣಿಕತೆ, ಶ್ರದಾ- ಭಾವನೆ, ಸ್ವಚ್ಛತೆ ಬಗ್ಗೆ ಇರುವ ಕಲ್ಪನೆ ಮತ್ತು ಅದನ್ನು ನಿತ್ಯ ಜೀವನದಲ್ಲಿ ಅಳವಡಿಸುವ ವಿಧಾನ ನಿಜಕ್ಕೂ ಇತರ ದೇಶಗಳಿಗೆ ಮಾದರಿ. ಕೊಲೆ, ಕಳುವು ಅಲ್ಲಿ ವಿಶೇಷ ಸುದ್ದಿಗಳಾಗುವುದಿಲ್ಲ. ವಿಹಾರಕ್ಕೆ ಒಯ್ದ ನಾಯಿಯೊಂದು ಉದ್ಯಾನದಲ್ಲಿ ಮಲವಿಸರ್ಜನೆ ಮಾಡಿದರೆ, ಆ ಮಲವನ್ನು ನಾಯಿಯ ಯಜಮಾನ ಸ್ವಚ್ಛಗೊಳಿಸದಿದ್ದರೆ ಅದು ಸುದ್ದಿಯಾಗುತ್ತದೆ. ನಮ್ಮ ದೇಶಕ್ಕೆ ಹೋಲಿಸಿದರೆ ಅಲ್ಲಿ ಭ್ರಷ್ಠಾಚಾರದ ಪ್ರಮಾಣ ಕಡಿಮೆ. ಅಲ್ಲಿನ ವ್ಯವಸ್ಥೆಯಲ್ಲಿ ನಿಯಮಗಳ ಪಾಲನೆಯಾಗುತ್ತದೆ. ಅದಕ್ಕೆ ಎಲ್ಲರೂ ಸ್ವಯಂ ಪ್ರೇರಯಿಂದ ಸಹಕರಿಸುತ್ತಾರೆ. ಇದು ಅಲ್ಲಿನ ಸಾಮಾಜಿಕ ವ್ಯವಸ್ಥೆ ಉತ್ತಮ ಪಡಿಸಲು ಸಹಕಾರಿಯಾಗಿದೆ. ವಿಕ್ಟೋರಿಯಾದಲ್ಲಿ ವರ್ಷಕ್ಕೆ ೪೮ ಅಪಘಾತ ನಡೆದುದನ್ನು ಅಲ್ಲಿನ ಆಡಳಿತ ಗಂಭೀರವಾಗಿ ಪರಿಗಣಿಸುತ್ತದೆ. ಆ ಬಗ್ಗೆ ಪ್ರಮುಖ ಸ್ಥಳಗಳಲ್ಲಿ ಫಲಕ ಹಾಕಲಾಗಿದೆ. ಅಲ್ಲಿನ ರಸ್ತೆಗಳ ಮೇಲೆ ಪೊಲೀಸರಿಲ್ಲ , ಆಧುನಿಕ ತಂಜ್ಞಾನದ ಕ್ಯಾಮರಾಗಳಿವೆ. ಸಂಚಾರ ನಿಯಮ ಉಲ್ಲಂಘಿಸಿದ ಪ್ರಮುಖ ವ್ಯಕ್ತಿಗಳಿಗೂ ಅಲ್ಲಿ ದಂಡವಿಧಿಸಲಾಗ್ಕುದೆ. ಆ ದಂಡ ಮೊತ್ತವನ್ನು ಕ್ರೆಡಿಟ್ ಕಾರ್ಡಗಳ ಮೂಲಕ ಪಾವತಿಸುವ ವ್ಯವಸ್ಥೆ ಇದ್ದು, ಭ್ರಷ್ಠಾಚಾರ ಕಾಣಸಿಗುವುದಿಲ್ಲ. ಶಿಕ್ಷಣ ವ್ಯವಸ್ಥೆಯನ್ನು ನಮಗೆ ಮತ್ತು ಅವರಿಗೆ ಹೋಲಿಕೆ ಮಾಡುವುದು ಕಷ್ಟ. ಅಲ್ಲಿರುವಷ್ಟು ಮೂಲ ಸೌಕರ್ಯ ನಮ್ಮಲ್ಲಿ ಇಲ್ಲ ಎಂದಲ್ಲ , ನಮ್ಮಲ್ಲಿ ಮೂಲ ಸೌಕರ್ಯಗಳು ಇದ್ದರೂ ನಮ್ಮ ಜನಸಂಖ್ಯೆ ಅವುಗಳನ್ನು ತಿಂದು ಹಾಕುತ್ತಿದೆ. ಜನಸಂಖ್ಯಾ ಸ್ಪೋಟ, ಭ್ರಷ್ಟಾಚಾರ, ಅಪ್ರಮಾಣಿಕತೆ, ಅಸಮರ್ಪಕ ರಾಜಕೀಯ ವ್ಯವಸ್ಥೆ ಈ ನಾಲ್ಕೂ ವಿಷಯಗಳು ಭಾರತದ ಹಿಂದುಳಿದಿರುವಿಕೆಗೆ ಪ್ರಮುಖ ಕಾರಣಗಳು. ಭಾರತದಲ್ಲಿ ಪ್ರಾಥಮಿಕ, ಪ್ರೌಢ, ಪಿ.ಯು.ಸಿ. ಎಂ ಮೂರು ಹಂತಗಳ ಶಿಕ್ಷಣವನ್ನು ವಿಭಜಿಸಿದ್ದರೆ ಆಸ್ಟ್ರೇಲಿಯಾದಲ್ಲಿ ಪಿ.ಯು.ಸಿ. ವರೆಗಿನ ಶಿಕ್ಷಣಕ್ಕೆ ಒಂದೇ ಸಂಸ್ಥೆ ಇರುತ್ತದೆ. ಅಲ್ಲಿನ ಪ್ರಾಥಮಿಕ ಹಂತದಲ್ಲಿ ಪಠ್ಯಕ್ರಮವಿಲ್ಲ . ಪರೀಕ್ಷೆಯೂ ಇಲ್ಲ, ಕ್ರಿಯಾಶೀಲತೆಗೆ ಹೆಚ್ಚಿನ ಆಧ್ಯತೆಕೊಡಲಾಗ್ಕುದೆ. ಎ.ಬಿ.ಸಿ.ಡಿ. ಎಂದು ವಿದ್ಯಾರ್ಥಿಗಳನ್ನು ವಿಂಗಡಿಸಲಾಗುತ್ತದೆ. ಆದರೆ ಇಲ್ಲಿ ಪದವಿಗೊಂದು ಸಂಸ್ಥೆ, ಸ್ನಾತಕಪದವಿಗೆ ವಿಶ್ವವಿದ್ಯಾಲಯ, ವೈದ್ಯಕೀಯ, ಇಂಜಿನಿಯರಿಂಗ್ ಮೊದಲಾದ ಕಲಿಕೆಗೆ ಬೇರೆ ಸಂಸ್ಥೆ ಎಂಬ ವಿಭಜನೆ ಇದೆ. ಆದರೆ ಅಲ್ಲಿ ಪದವಿ, ಸ್ನಾತಕ ಪದವಿ, ವೈದ್ಯಕೀಯ, ಇಂಜಿನಿಯರಿಂಗ್ ಮೊದಲಾದ ಎಲ್ಲ ಕೋರ್ಸುಗಳೂ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುತ್ತವೆ. ಆಲ್ಲಿಯೂ ಖಾಸಗಿ, ಸರಕಾರಿ ಶಾಲೆಗಳು ಇವೆ. ಆದರೆ ಖಾಸಗಿ ಶಾಲೆಗಳಿಗೆ ಸರಕಾರಿ ಶಾಲೆಗಳು ಪ್ರತಿಸ್ಪರ್ಧೆ ಉತ್ತಮವಾಗಿವೆ. ವಿದೇಶ ಪ್ರವಾಸದಿಂದ ಅಲ್ಲಿಯ ಶೈಕ್ಷಣಿಕ ವ್ಯವಸ್ಥೆಯನ್ನು ತಿಳಿದುಕೊಳ್ಳಲು ಸಹಕಾರಿಯಾಯ್ಕಿ. ಅದನ್ನು ಯಥಾವ್ಕೃಗಿ ಅಳವಡಿಸಿಕೊಳ್ಳುವುದು ಕಷ್ಟಕರವಾಗಿರುವುದರಿಂದ ಅಭಿವೃದಿ-ಯ ದೃಷ್ಟಿಯಲ್ಲಿ ಪ್ರಯೋಜನ ಪಡೆದುಕೊಳ್ಳಹುದು ಅಲ್ಲಿಯ ತೀರಾ ಹಿಂದುಳಿದ ಹಳ್ಳಿಯಲ್ಲಿರುವ ಶಾಲೆಯನ್ನು ಇಲ್ಲಿಯ ಮುಂದುವರಿದ ನಗರದ ಶಾಲೆಗೆ ಹೋಲಿಕೆ ಮಾಡುವುದ ಕೂಡ ಕಷ್ಟವಾಗುತ್ತದೆ. ಆದರೆ ಮಕ್ಕಳ ಪ್ರತಿಭೆ ಅನಾವರಣಕ್ಕೆ ಅವರು ಕೈಕೊಂಡಿರುವ ಕ್ರಮ ಅನುಸರಣೀಯ. ಹಾಗಂ ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ತೀರಾ ಹದಗೆಟ್ಟಿದೆ ಎಂದಲ್ಲ, ಇಲ್ಲಿಯ ಜನಸಂಖ್ಯೆ ಅದನ್ನು ನುಂಗಿ ಹಾಕುತ್ತಿದೆ. ಆಸ್ಟ್ರೇಲಿಯಾದಲ್ಲಿ ಪದವೀಧರರು ಸೇರಿದಂತೆ ಬೇರೆ ಸರ್ಕಾರಿ ಕೆಲಸಗಾರರಿಗೆ ಉದ್ಯೋಗ ಭದ್ರತೆಗಳಿಲ್ಲ, ಐದು ವರ್ಷಗಳಿಗೊಮ್ಮೆ ಮರುನೇಮಕ ನಡೆಯುತ್ತದೆ. ಆದುದರಿಂದ ಭ್ರಷ್ಠಾಚಾರ ಮತ್ತು ಅಲಕ್ಷತನಕ್ಕೆ ಅವಕಾಶವೂ ಇಲ್ಲ. ಅಪಘಾತ ಸಂಖ್ಯೆ ಅಂ ಕಡಿಮೆ ಯಾಗಿದ್ದರೂ ಅಪಘ್ಕಾ ನಡೆದರೆ ಆಸ್ಪ್ಕೃಗೆ ಫೋ ಮಾಡಿದರೆ ಮೂರು ಕಡೆಯಿಂದ ಸಹಾಯಕ್ಕಾಗಿ ಅಂಲೆ ಕಳಿಸುವ ವ್ಯವಸ್ಥೆ ಇದೆ. ಶ್ರೀ ಅಭಿನವ ಗವಿಸಿದ್ದೇಶ್ವರ ಶ್ರೀ ಗಳಿಗೆ ಸನ್ಮಾನ : * ಆಸ್ಟ್ರೇಲಿಯಾದ ಶಿಕ್ಷಣ ಸಂಸ್ಥೆಗಳನ್ನು ಸಂದರ್ಶಿಸಲು ಹೋಗುವ ಸಂದರ್ಭದಲ್ಲಿ ಇವರಿಗೆ ಗಂಗಾವತಿಯಲ್ಲಿ ನಡೆದ ಜ್ಞಾನ ದೀಪ್ಕೋತ್ಸವ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಜಿಲ್ಲಾಧ್ಯಕ್ಷರಾದ ಪರಣ್ಣ ಮುನವಳ್ಳಿ, ಬಸವರಾಜ ಸ್ವಾಮಿ ಮಳಿಮಠ ಮುಂದವರು ಸನ್ಮಾನಿಸಿ ಬೀಳ್ಕೊಟ್ಟರು. * ಕೊಪ್ಪಳದ ಗವಿಮಠದಲ್ಲಿ ವಿದೇಶ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಭಕ್ತಾದಿಗಳು ಸನ್ಮಾನಿಸಿ ಅಭಿನಂದಿಸಿ ಬೀಳ್ಕೊಟ್ಟರು. · ಆಸ್ಟ್ರೇಲಿಯಾದಲ್ಲಿ ಅಲ್ಲಿನ ಬಸವ ಸಮಿತಿ ವತಿಯಿಂದ ಶ್ರೀಗಳನ್ನು ಸನ್ಮಾನಿಸಲಾಯಿತು · ಆಸ್ಟ್ರೇಲಿಯಾ ಪ್ರವಾಸ ಕೈಕೊಂಡು ಕೊಪ್ಪಳಕ್ಕೆ ಮರಳಿದ ಮೇಲೆ ಕೊಪ್ಪಳ ತಾಲೂಕಾ ವಚನ ಸಾಹಿತ್ಯ ಅಕಾಡೆಮಿಯಿಂದ ಗೌರವ ಸಲಹೆಗಾರರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ಅಧ್ಯಕ್ಷರಾದ ಬಸಪ್ಪ ಬಾರಕೇರ, ಕಾರ್ಯದರ್ಶಿಗಳಾದ ಸೋಮೇಶ ಪತ್ತಾರ, ಗೌರವಾಧ್ಯಕ್ಷರಾದ ಪ್ರೇಮಾವತಿ ಪಾಟೀಲ ಕೊಪ್ಪಳದ ಗವಿಮಠದಲ್ಲಿ ಸನ್ಮಾನಿಸಿ ಗೌರವಿಸಿದರು. * ಕೊಪ್ಪಳದ ಮಿಲ್ಲತ್ ಶಿಕ್ಷಣ ಸಂಸ್ಥೆಯಿಂದ ಅಧ್ಯಕ್ಷರಾದ ಎಂ. ಸಾಧಿಕ ಅಲಿ ಮತ್ತು ಸಂಸ್ಥೆಯ ಪದಾಧಿಕಾರಿಗಳು ಶ್ರೀಗಳನ್ನು ಸನ್ಮಾನಿಸಿದರು. ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದುಬೈ ಪ್ರವಾಸ : ದಿನಾಂಕ : ೨೫-೪-೨೦೦೭ ರಿಂದ ೬-೫-೨೦೦೭ ರ ವರೆಗೆ ದುಬೈ ಪ್ರವಾಸ ಕೈಕೊಂಡರು. ಕೊಪ್ಪಳ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ|| ಆರ್.ಎಂ. ಪಾಟೀಲ, ನಿವೃತ್ತ ಶಿಕ್ಷಕರಾದ ಶರಣಬಸವರಾಜ ಬಿಸರಹಳ್ಳಿ ಶ್ರೀಗಳ ಜೊತೆಗೆ ಪ್ರವಾಸದಲ್ಲಿದ್ದರು. ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸಂಕಲ್ಪಗಳು : ಜನ ಸಾಮಾನ್ಯರಿಗೆ ಬಹುತೇಕ ಆಸೆಗಳಿರುತ್ತವೆ. ಶಿವಯೋಗಿಗಳಿಗೆ ಸಂಕಲ್ಪಗಳಿರುತ್ತವೆ. ಪೂಜ್ಯರ ಸಂಕಲ್ಪಗಳು ಅವರಿವರೆನ್ನದೆ ಸಮಸ್ತ ಜೀವರಾಶಿಯ ಸರ್ವಾಂಗೀಣ ಅಭಿವೃದ್ಧಿಯ ಆಸೆಯನ್ನು ಹೊಂದಿರುತ್ತದೆ. ಸಕಲ ಚರಾಚರ ಜೀವಿಗಳು ಶಿವನ ಈ ನೆಲೆಯಲ್ಲಿ ಸುಖ ಶಾಂತಿ ಹಾಗೂ ಸಮೃದ್ದಬಾಳನ್ನು ಬೆಳಗಬೇಕೆಂದು ಅವರ ಶ್ರೀಸಂಕಲ್ಪವಾಗಿರುತ್ತದೆ.. * ಅಂಧ, ಮೂಕ ಮತ್ತು ಕಿವುಡ ಮಕ್ಕಳಿಗಾಗಿ ವಸತಿ ಶಾಲೆ * ಬುದ್ದಿ-ಮಾಂದ್ಯ ಮಕ್ಕಳಿಗಾಗಿ ಪುನಃಶ್ಚೇತನ ಸಂಸ್ಥೆ . · ವೃದಾ-ಶ್ರಮ * ಅನಾಥಾಶ್ರಮ * ಗ್ರಾಮೀಣಾಭಿವೃದ್ಧಿ ಸಂಸ್ಥೆ * ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯಗಳು * ತಾಂತ್ರಿಕ ಮಹಾವಿದ್ಯಾಲಯಗಳು * ಆಡಳಿತ ಸಂಸ್ಥೆಗಳು ಈ ಮೇಲಿನ ಸಂಸ್ಥೆಗಳ ಬೆಳವಣಿಗೆಯ ಮೊದಲ ಹಂತವಾಗಿ ಈಗಾಗಲೇ ಕೊಪ್ಪಳ ತಾಲೂಕಿನ ಹಲಗೇರಿಯಲ್ಲಿ (ಎ.ಹೆಚ್.೬೩ಗೆ ಹೊಂದಿಕೊಂಡು) ಒಂದೇ ಕಡೆಗೆ ನೂರಾ ಹತ್ತು (೧೧೦) ಎಕರೆ ಜಮೀನನ್ನು ಅಲ್ಲಿಯ ಭಕ್ತರ ಸಹಕಾರದೊಂದಿಗೆ ಪಡೆದುಕೊಳ್ಳಲಾಗಿದೆ. ಶ್ರೀ ಗವಿಸಿದ್ದೇಶ್ವರ ಟ್ರಸ್ಟಿನ ಅಡಿಯಲ್ಲಿ ನಡೆಯುತ್ತಿರುವ ಸಂಸ್ಥೆಗಳು ಕ್ರ.ಸಂ. ಸಂಸ್ಥೆಯ ಹೆಸರು ಸ್ಥಾಪನೆ ೧) ಶ್ರೀ ಗವಿಸಿದ್ಧೇಶ್ವರ ಉಚಿತ ವಸತಿ ಮತ್ತು ಪ್ರಸಾದ ನಿಲಯ, ಹೂವಿನ ಹಡಗಲಿ ೧೯೫೦ ೨) ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢ ಶಾಲೆ, ಕೊಪ್ಪಳ ೧೯೫೧ ೩) ಶ್ರೀ ಗವಿಸಿದ್ಧೇಶ್ವರ ಪ್ರಾಥಮಿಕ ಶಾಲೆ, ಮಿಟ್ಟಿಕೇರಿ, ಕೊಪ್ಪಳ ೧೯೫೧ ೪) ಶ್ರೀ ಗವಿಸಿದ್ಧೇಶ್ವರ ಪ್ರಾಥಮಿಕ ಶಾಲೆ, ಕುಂಬಾರ ಓಣಿ, ಕೊಪ್ಪಳ ೧೯೫೧ ೫) ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆ, ಕುಕನೂರ ೧೯೬೩ ೬) ಶ್ರೀ ಗವಿಸಿದ್ಧೇಶ್ವರ ಪ್ರಾಥಮಿಕ ಶಾಲೆ, ಕುಕನೂರ ೧೯೬೩ ೭) ಶ್ರೀ ಗವಿಸಿದ್ಧೇಶ್ವರ ಶಿಶುವಿಹಾರ ಶಾಲೆ, ಕುಕನೂರ ೧೯೬೩ ೮) ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯ, ಕೊಪ್ಪಳ ೧೯೬೩ ೯) ಶ್ರೀ ಗವಿಸಿದ್ಧೇಶ್ವರ ಪದವಿಪೂರ್ವ ಮಹಾವಿದ್ಯಾಲಯ, ಕೊಪ್ಪಳ ೧೯೬೩ ೧೦) ಶ್ರೀ ಗವಿಸಿದ್ಧೇಶ್ವರ ಅಂಗನವಾಡಿ ಶಿಕ್ಷಕಿಯರ ತರಬೇತಿ ಕೇಂದ್ರ, ಕುಕನೂರ ೧೯೮೦ ೧೧) ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠ, ಕೊಪ್ಪಳ ೧೯೮೯ ೧೨) ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ, ಕೊಪ್ಪಳ ೧೯೯೮ ೧೩) ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಆಸ್ಪತ್ರೆ ಕೊಪ್ಪಳ ೧೯೯೮ ೧೪) ಶ್ರೀ ಗವಿಸಿದ್ಧೇಶ್ವರ ಉಚಿತ ವಸತಿ ಮ್ಕೃ ಪ್ರಸಾದ ನಿಲಯ ಗಜೇಂದ್ರಗಡ ೨೦೦೧ ೧೫) ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯ, ಕೊಪ್ಪಳ ೨೦೦೪ ೧೬) ಶ್ರೀ ಗವಿಸಿದ್ಧೇಶ್ವರ ಶಿಕ್ಷಕರ ರಬೇತಿ ಕೇಂದ್ರ, ಕೊಪ್ಪಳ ೨೦೦೪ ೧೭) ಶ್ರೀ ಗವಿಸಿದ್ಧೇಶ್ವರ ವೈದಿಕ ಮತ್ತು ಜೋತಿಷ್ಯ ಪಾಠಶಾಲೆ, ಕೊಪ್ಪಳ ೨೦೦೪ ೧೮) ಶ್ರೀ ಗವಿಸಿದ್ಧೇಶ್ವರ ಇಸ್ಟಿಟ್ಯೂಟ್ ಆಫ್ ವೊಕೇಷನ ಎಕ್ಸಲೆ, ಕೊಪ್ಪಳ ೨೦೦೫ ೧೯) ಶ್ರೀ ಗವಿಸಿದ್ಧೇಶ್ವರ ಸ್ಕೂ, ಕೊಪ್ಪಳ ೨೦೦೫ ೨೦) ಶ್ರೀ ಗವಿಸಿದ್ಧೇಶ್ವರ ೨೦೦೦ ವಿದ್ಯಾರ್ಥಿಗಳ ಉಚಿತ ವಸತಿ ಮತ್ತು ಪ್ರಸಾದ ನಿಲಯ, ಕೊಪ್ಪಳ (ಅಂದಾಜು ವೆಚ್ಚ ರೂ. ೬ ಕೋಟಿ) ೨೦೦೬ ೨೧) ಶ್ರೀ ಗವಿಸಿದ್ಧೇಶ್ವರ ಗೋ ಸಂರಕ್ಷ ಘಟಕ, ಸಂಕನಾಳ, || ಸಿಂಧನೂರ, ಜಿ || ರಾಯಚೂರ ೨೦೦೬ ೨೨) ಶ್ರೀ ಗವಿಸಿದ್ಧೇಶ್ವರ ಭಸ್ಮ ಶುದ್ದಿ-ಕರಣ ಘಟಕ, ಸಂಕನಾಳ || ಸಿಂಧನೂರ, ಜಿ || ರಾಯಚೂರ ೨೦೦೬ ೨೩) ಶ್ರೀ ಮತಿ ಶಾರದಮ್ಮ ಕೊತಬಾಳ ಕಾಲೇಜ್ ಆಫ್ ಬಿಜನೆಸ್ ಮ್ಯಾನೇಜಮೆಂಟ್ , ಕೊಪ್ಪಳ ೨೦೦೭ |